Thursday, September 19, 2024

ಪ್ರಾಯೋಗಿಕ ಆವೃತ್ತಿ

ಗ್ರಾ.ಪಂ. ಅಧ್ಯಕ್ಷರಾಗಿ ಚಂದ್ರಕಲಾ ಬಸವರಾಜು ಅಯ್ಕೆ

ಕೆ.ಆರ್.ಪೇಟೆ ತಾಲ್ಲೂಕಿನ ಆಲಂಬಾಡಿಕಾವಲು ಗ್ರಾಮ ಪಂಚಾಯಿತಿಯ ನೂತನ  ಅಧ್ಯಕ್ಷರಾಗಿ ಚಂದ್ರಕಲಾ ಬಸವರಾಜು ಅವಿರೋಧ  ಆಯ್ಕೆಯಾಗಿದ್ದಾರೆ.

ಈ ಹಿಂದಿನ ಅಧ್ಯಕ್ಷರಾದ ಜೆ.ಸುಮ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಿಗಧಿಯಾಗಿತ್ತು. ಅಧ್ಯಕ್ಷ ಸ್ಥಾನ ಬಯಸಿ  ಚಂದ್ರಕಲಾ ಬಸವರಾಜು ಅವರನ್ನು ಹೊರತು ಪಡಿಸಿ ಬೇರೆ ಯಾರೂ ಸಹ ನಾಮಪತ್ರ ಸಲ್ಲಿಸದೇ ಇರುವ ಕಾರಣ ಅಧ್ಯಕ್ಷರಾಗಿ ಚಂದ್ರಕಲಾ ಬಸವರಾಜು  ಅವಿರೋಧ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ತಾಲ್ಲೂಕು ಪಂಚಾಯಿತಿ ಇಓ ಸತೀಶ್ ಕಾರ್ಯನಿರ್ವಹಿಸಿ ಅವಿರೋಧ ಆಯ್ಕೆ  ಘೋಷಣೆ ಮಾಡಿದರು.  ಸಹ ಚುನಾವಣಾಧಿಕಾರಿಯಾಗಿ ತಾ.ಪಂ.ವ್ಯವಸ್ಥಾಪಕ ಅನಿಲ್ ಬಾಬು, ಪಿಡಿಓ ಎಂ.ಶಿವಕುಮಾರ್ ಕಾರ್ಯನಿರ್ವಹಣೆ ಮಾಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಬಿ.ಎಲ್.ಎ.ಆರ್.ರಘು, ಜಿ.ಪಂ.ಮಾಜಿ ಸದಸ್ಯ ರಾಮದಾಸ್,  .ಪಂ.ಮಾಜಿ ಸದಸ್ಯ ಎ.ಎಂ.ಸಂಜೀವಪ್ಪ, ಶಶಿಧರ್ ಸಂಗಾಪುರ, ಸರ್ವೆ ದೇವರಾಜು, ಎಂ.ಮೋಹನ್, ಬೋರಲಿಂಗೇಗೌಡ,  ಸ್ವಾ ಮೀಗೌಡ, ತನ್ವೀರ್ ಪಾಷಾ, ಬಸವರಾಜು,  ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ.ಟಿ.ಕರಿಶೆಟ್ಟಿ, ಗ್ರಾ.ಪಂ. ಸದಸ್ಯರಾದ  ಜೆ.ಸುಮ, ಮುಜಾಹಿದ್‌ಖಾನ್  ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!