Thursday, September 19, 2024

ಪ್ರಾಯೋಗಿಕ ಆವೃತ್ತಿ

ಹರಳಕೆರೆ | ರೋಗಿ ಸ್ವಾಮಿಗೆ ಸಾಂತ್ವನ ಹೇಳಿದ ಕದಲೂರು ಉದಯ್

ಹರಳಕೆರೆ ಸ್ವಾಮಿ ಅವರ ಮನವಿ ಮೇರೆಗೆ ಇಂದು ಮಂಗಳವಾರ ಕದಲೂರು ಉದಯ್ ಅವರು ಆತನ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಸೋಮವಾರ ಹರಳಕೆರೆ ಸ್ವಾಮಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ವಿಡಿಯೋ ಬಿಡುಗಡೆಗೊಳಿಸಿ,ಇಂದು ಸಂಜೆ ವೇಳೆಗೆ ಉದಯಣ್ಣಾ ನನ್ನನ್ನು ಬೇಟಿ ಆಗಬೇಕು ನಾನು ಅವರನ್ನು ನೊಡುವಾ ಆಸೆಯಾಗಿದೆ ಎಂದು ಹೇಳಿದ್ದನು.

ಆತನ ವಿಡಿಯೋ ನೋಡಿದ ಹಿನ್ನಲೆಯಲ್ಲಿ, ಆತನ ಬಯಕೆಯನ್ನು ಮತ್ತು ಆತನ ಯೋಗಕ್ಷೇಮವನ್ನು ವಿಚಾರಿಸಲು ಇಂದು ಸಂಜೆ ಸಮಾಜ ಸೇವಕ ಕದಲೂರು ಉದಯ್ ಅವರು ಹರಳೆಕೆರೆ ಗ್ರಾಮದ ಸ್ವಾಮಿಯನ್ನು ಭೇಟಿಯಾಗಿ, ಆತನ ಆರೋಗ್ಯ ವಿಚಾರಿಸಿದರು. ನಂತರ ಆತನ ಕುಟುಂಬದವರೊಟ್ಟಿಗೆ ಚರ್ಚಿಸಿ ನೆರವಿ‌ನ ಹಸ್ತ ಚಾಚಿದರು.

ಸ್ವಾಮಿಯವರನ್ನು ಕದಲೂರು ಉದಯ್ ಅವರು ಭೇಟಿ ಮಾಡಲಿ ಎಂದು ನುಡಿಕರ್ನಾಟಕ.ಕಾಮ್ ವರದಿ ಮಾಡಿ ಗಮನ ಸೆಳೆದಿತ್ತು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!