ಶ್ರೀರಂಗಪಟ್ಟಣದಲ್ಲಿ ಸುರಿದ ಬಿರುಗಾಳಿ ಸಹಿತ ಮಳೆಗೆ ಧರೆಗುರುಳಿದ ಮರದ ರಂಬೆ-ಕೊಂಬೆಗಳನ್ನ ಅಚೀವರ್ಸ್ ಅಕಾಡೆಮಿ ವಿದ್ಯಾರ್ಥಿಗಳು ತೆರವುಗೊಳಿಸಿದರು.
ಶ್ರೀರಂಗಪಟ್ಟಣದ ಪೋಸ್ಟ್ ಆಫೀಸ್ ರಸ್ತೆ, ಸ್ಟೇಡಿಯಂ ರಸ್ತೆ, ಕುಂಬಾರಗೆರೆ ಬೀದಿ, ನಿಮಿಷಾಂಬ ದೇವಸ್ಥಾನಕ್ಕೆ ಹೋಗುವ ರಸ್ತೆ, ಸೇರಿದಂತೆ ನಾನಾ ಕಡೆ ಮುರಿದು ಬಿದ್ದಿದ್ದ ಮರದ ರಂಬೆ-ಕೊಂಬೆಗಳನ್ನ ವಿದ್ಯಾರ್ಥಿಗಳು ತೆರೆವು ಗೊಳಿಸಿ ಸುಗಮ ಸಂಚಾರಕ್ಕೆ ನೆರವಾದರು. ಶುಕ್ರವಾರ ಬೆಳಗ್ಗೆ ತೆರವು ಕಾರ್ಯಾಚರಣೆ ನಡೆಸಿದ ವಿದ್ಯಾರ್ಥಿಗಳಿಗೆ ಪುರಸಭೆ ಸಿಬ್ಬಂದಿಗಳು ಸಾಥ್ ನೀಡಿದರು.
ತೆರವು ಕಾರ್ಯಾಚರಣೆಯಲ್ಲಿ ಅಚೀವರ್ಸ್ ಅಕಾಡೆಮಿಯ ಅಧ್ಯಕ್ಷ ಹಾಗೂ ರಾಷ್ಟ್ರಪತಿ ವಿಜೇತರಾದ ಡಾ.ರಾಘವೇಂದ್ರ ಅವರ ನೇತೃತ್ವದಲ್ಲಿ, ಅಕಾಡೆಮಿ ನಿರ್ದೇಶಕರಾದ ಗುರುಪ್ರಸಾದ್, ವಿದ್ಯಾರ್ಥಿಗಳಾದ ಧನುಷ್, ನಿಖಿಲ್ ಜಾದವ್, ಶಿವು, ಮೋಕ್ಷಿತ್, ಸೇರಿದಂತೆ 16 ವಿದ್ಯಾರ್ಥಿಗಳು ಈ ಶ್ರಮದಾನ ಕಾರ್ಯದಲ್ಲಿ ಪಾಲ್ಗೊಂಡಿದ್ದರು.