ಗುಣಮಟ್ಟದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.
ಮಂಡ್ಯ ತಾಲೂಕಿನ ದುದ್ಧ ಹೋಬಳಿಯ ಮಲ್ಲನಾಯಕನಕಟ್ಟೆ ಗ್ರಾಮದಲ್ಲಿ ಹಲವು ಕೋಟಿ ರೂ.ಗಳ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಲ್ಲನಾಯಕನಕಟ್ಟೆ ಗ್ರಾಮದಿಂದ ಗಾಣದಾಳು ಗ್ರಾಮದ ಮೂಲಕ ಮೊಡಚಾಕನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿ ಪಡಿಸಲು 5 ಕೋಟಿ ರೂ.ವೆಚ್ಚ ಮಾಡಲಾಗುತ್ತಿದೆ, ಚಂದಗಾಲು ಗ್ರಾಮದಿಂದ ತಂಡಸನಹಳ್ಳಿಗೆ ಹೋಗುವ ರಸ್ತೆ ಅಭಿವೃದ್ದಿಗೆ 3 ಕೋಟಿ ರೂ.ಗಳಲ್ಲಿ ಉಳಿಕೆ ರಸ್ತೆಯನ್ನು ಅಭಿವೃದ್ದಿ ಪಡಿಸಲಾಗುತ್ತಿದೆ, ಗಾಣದಾಳು ಗ್ರಾಮದಲ್ಲಿನ ವಿವಿಧ ರಸ್ತೆ ಅಭಿವೃದ್ದಿಗಾಗಿ 50 ಲಕ್ಷ ರೂ, ಕುರಿಕೊಪ್ಪಲು ಗ್ರಾಮದ ರಸ್ತೆ ಅಭಿವೃದ್ದಿಗೆ 50 ಲಕ್ಷ ರೂ. ವಡ್ಡರಹಳ್ಳಿ ಕೊಪ್ಪಲು ರಸ್ತೆ ಅಬಿವೃದ್ದಿಗೆ 50 ಲಕ್ಷ ರೂ., ಸಮುಮಾರು 1.50 ಕೋಟಿ.ರೂ.ಗಳಲ್ಲಿ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಗ್ರಾ.ಪಂ.ಮಾಜಿ ಅಧ್ಯಕ್ಷ ಉಮೇಶ್, ಮುಖಂಡರು ಎಂ.ಸಿ.ಶ್ರೀಕಂಠೇಗೌಡ, ರೈಸ್ಮಿಲ್ ಧನಂಜಯ, ಗ್ರಾ.ಪಂ.ಸದಸ್ಯರಾದ ಶ್ರೀಧರ್, ರೇಖಾ, ಮುಖಂಡ ಚಿನ್ನಗಿರಿ ಸೇರಿದಂತೆ ಮತ್ತಿತರರು ಹಾಜರಿದ್ದರು.