Monday, September 16, 2024

ಪ್ರಾಯೋಗಿಕ ಆವೃತ್ತಿ

ಹಿಂದೂ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ : ಡಿ.ಸಿ.ತಮ್ಮಣ್ಣ

ಹಿಂದುತ್ವ ಎಂಬುದರ ಅರ್ಥ ಎಲ್ಲಾ ಧರ್ಮದ ವರ್ಗಗಳ ಜನಾಂಗವನ್ನು ಒಗ್ಗೂಡಿಸಿ ನಮ್ಮ ಭಾರತದಲ್ಲಿ ಹಿಂದೂ ಎಂದು ಕರೆಯುತ್ತೇವೆ, ಇದರ ಬಗ್ಗೆ ಅವರು ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು.

ಮದ್ದೂರು ಪಟ್ಟಣದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ನೇರವಾಗಿ ಮಾತನಾಡಿ, ಸತೀಶ್ ಜಾರಕಿಹೊಳಿಯವರು ಈ ರೀತಿ ಮಾತನಾಡಿರುವುದನ್ನು, ಅವರ ಪಕ್ಷದವರೇ ಖಂಡಿಸಿದ್ದಾರೆ. ಅವರವರ ಧರ್ಮದ ಬಗ್ಗೆ ಅವರವರಿಗೆ ನಂಬಿಕೆ ಹಾಗೂ ವಿಶ್ವಾಸವಿರುತ್ತದೆ, ಯಾವುದೇ ಧರ್ಮದ ಬಗ್ಗೆ ನಾವು ಮಾತನಾಡಬೇಕಾದರೆ ಯೋಚಿಸಿ ಮಾತನಾಡಬೇಕು ಎಂದು ತಿಳಿಸಿದರು.

ನಮ್ಮ ದೇಶದಲ್ಲಿ ವಾಕ್ ಸ್ವಾತಂತ್ರವಿದೆ, ಯಾರು ಬೇಕಾದರೂ ,ಎಲ್ಲೂ ಯಾವುದೇ ವಿಚಾರವನ್ನು ಮಾತನಾಡಬಹುದು. ಆದರೆ ಒಂದು ಧರ್ಮದ ಬಗ್ಗೆ ಮಾತನಾಡಬೇಕಾದರೆ ಎಚ್ಚರದಿಂದ ಮಾತನಾಡಬೇಕು ಎಂದರು.

ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಸುರೇಶ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಆರ್.ಪ್ರಸನ್ನ ಕುಮಾರ್, ಉಪಾಧ್ಯಕ್ಷೆ ಸುಮಿತ್ರ ರಮೇಶ್ ಹಾಗೂ ಜೆಡಿಎಸ್ ಅಧ್ಯಕ್ಷ ಚಿಕ್ಕ ತಿಮ್ಮೇಗೌಡ, ಉಪಾಧ್ಯಕ್ಷ ದೇವರಹಳ್ಳಿ ವೆಂಕಟೇಶ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!