ಮಂಡ್ಯ ನಗರದ ಲೇಬರ್ ಕಾಲೋನಿಯ ಮುಸಲ್ಮಾನ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಕಾಂಗ್ರೆಸ್ ಮುಖಂಡ ಗಣಿಗ ರವಿಕುಮಾರ್ ಅವರು ಇಫ್ತಾರ್ ಔತಣಕೂಟ ಏರ್ಪಡಿಸಿದ್ದರು.
ಪವಿತ್ರ ರಂಜಾನ್ ಹಿನ್ನಲೆಯಲ್ಲಿ ಲೇಬರ್ ಕಾಲೋನಿಯ ನೂರಾರು ಮುಸ್ಲಿಂ ಬಂಧುಗಳು ಇಫ್ತಾರ್ ಭೋಜನಕೂಟದಲ್ಲಿ ಭಾಗವಹಿಸಿದ್ದರು. ಗಣಿಗ ರವಿಕುಮಾರ್ ಅವರೇ ಮುಂದೆ ನಿಂತು ಮುಸಲ್ಮಾನ ಬಾಂಧವರಿಗೆ ಭೋಜನ ಬಡಿಸಿದರು.
ಇಫ್ತಾರ್ ಕೂಟದಲ್ಲಿ ಮಾಜಿ ನಗರಸಭಾ ಸದಸ್ಯ ನಯಾಜ್ ಖಾನ್, ಯುವ ಮುಖಂಡರಾದ ದೀಪಕ್ ಹಾಗೂ ಮುಸಲ್ಮಾನ ಸಮಾಜದ ಮುಖಂಡರುಗಳು ಭಾಗವಹಿಸಿದ್ದರು.