Thursday, September 19, 2024

ಪ್ರಾಯೋಗಿಕ ಆವೃತ್ತಿ

ನಾಲೆಯ ಮೇಲ್ಗಾಲುವೆ ಸೇತುವೆ ಕಾಮಗಾರಿಗೆ ಶಾಸಕರ ಚಾಲನೆ

ಮದ್ದೂರು ತಾಲ್ಲೂಕಿನ ಭಾರತೀನಗರ ಸಮೀಪದ ಮುಟ್ಟನಹಳ್ಳಿ ಗ್ರಾಮದ ಸೂಳೆಕೆರೆ ದಕ್ಷಿಣ ನಾಲೆಯ ಮೇಲ್ಗಾಲುವೆ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು.

ಈ ಹಿಂದೆ ಡಿ.ಸಿ.ತಮ್ಮಣ್ಣ ಅವರು ತಮ್ಮ ಶಾಸಕರ ಅವಧಿಯಲ್ಲಿ ಈ ಕಾಮಗಾರಿಗೆ ಅನುಮೋದನೆ ದೊರಕಿಸಿಕೊಟ್ಟಿದ್ದರಿಂದ 75 ಲಕ್ಷ ರೂ ಬಿಡುಗಡೆಗೊಂಡಿತ್ತು. ಆದರೆ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾಮಗಾರಿಗೆ ಡಿ.ಸಿ.ತಮ್ಮಣ್ಣ ಅವರು ಚಾಲನೆ ನೀಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಇಂದಿನ ಶಾಸಕ ಕೆ.ಎಂ.ಉದಯ್ ಅವರು ನಿರ್ಮಾಣವಾಗುತ್ತಿರುವ ಮೇಲ್ಗಾಲುವೆ ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಕಾವೇರಿ ನೀರಾವರಿ ನಿಗಮದ ಎಇಇ ಎಲ್.ಪ್ರಶಾಂತ್, ಎಇ ಅವಿನಾಶ್ ಅವರೊಂದಿಗೆ ಶಾಸಕರು ನಾಲೆಯನ್ನು ವೀಕ್ಷಣೆ ಮಾಡಿದರು.

ಇದೇ ವೇಳೆ ಶಾಸಕ ಕೆ.ಎಂ.ಉದಯ್ ಮಾತನಾಡಿ, ಕ್ಷೇತ್ರದ ಅಭಿವೃದ್ದಿಗಾಗಿ ಶ್ರಮಿಸುತ್ತೇನೆ. ನಮ್ಮ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಜನರ ಅಭಿವೃದ್ದಿಗೆ ಶ್ರಮಿಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಲಿಂಗೇಗೌಡ, ಮೂಲೆಅಟ್ಟಿ ಚಂದ್ರಶೇಖರ್, ಮಹೇಂದ್ರ, ಮಂಚೇಗೌಡ, ಕುಮಾರ್, ಚಿಕ್ಕಹೈದೇಗೌಡ, ಮಹೇಶ್, ಸ್ವಾಮಿ, ಶಂಕರ್, ರಾಜೀವ್, ಗುತ್ತಿಗೆದಾರ ಕೆಂಪೇಗೌಡ ಸೇರಿದಂತೆ ಹಲವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!