ಮಂಡ್ಯ ತಾಲ್ಲೂಕಿನ ದುದ್ದ ಹೋಬಳಿಯ ಅವ್ವೇರಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಯಿಂದ ಗಾಯಗೊಂಡ ರೈತ ಮಹಿಳೆಯ ನಿವಾಸಕ್ಕೆ ತೆರಳಿ ರೈತಸಂಘದ ಮುಖಂಡರು ಶನಿವಾರ ಸಾಂತ್ವನ ಹೇಳಿದರು.
ಅವ್ವೇರಹಳ್ಳಿ ಗ್ರಾಮದ ದೇವರಾಜು ಎಂಬುವವರ ಪತ್ನಿ ಬಸಮ್ಮಣ್ಣಿ ಚಿರತೆ ದಾಳಿಗೆ ತುತ್ತಾಗಿ, ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಮ್ಮ ಮನೆಗೆ ವಾಪಸ್ಸಾಗಿದ್ದರು, ಈ ಸಂದರ್ಭದಲ್ಲಿ ರೈತ ಮುಖಂಡರಾದ ಸುನೀತಾ ಪುಟ್ಟಣ್ಣಯ್ಯ ಹಾಗೂ ಗೋವಿಂದೇಗೌಡ ಅವರು ಗಾಯಾಳುವಿನ ಮನೆಗೆ ತೆರಳಿ ಆರೋಗ್ಯ ವಿಚಾರಿಸಿ, ಸಾಂತ್ವನ ಹೇಳಿದರು.
ನಿನ್ನೆಯಷ್ಟೆ ರೈತ ಮಹಿಳೆ ಮೇಲೆ ಎರಗಿದ ಚಿರತೆ, ಆಕೆಯನ್ನು ಗಾಯಗೊಳಿಸಿ ಪರಾರಿಯಾಗಿತ್ತು. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು.