ಈಶ್ವರಪ್ಪ ಅಪರಾಧವೇನೂ ಮಾಡಿಲ್ಲ.ಕೆಲವರು ಮಾಡಿರುವ ಸಂಚಿಗೆ ಅವರು ಬಲಿಯಾಗಿದ್ದಾರೆ. ಇನ್ನು ಎರಡು-ಮೂರು ತಿಂಗಳಲ್ಲಿ ತನಿಖೆ ಮುಗಿದು ಅವರು ನಿರ್ದೋಷಿಯಾಗಿ ಮತ್ತೆ ಸಚಿವ ಸಂಪುಟ ಸೇರುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.
ಈಶ್ವರಪ್ಪ ರಾಜೀನಾಮೆ ಹಿಂದೆ ಕೆಲವರ ಸಂಚಿದೆ.ಈಶ್ವರಪ್ಪನವರನ್ನು ಹಣಿಯಲು ಕೆಲವು ಕಾಂಗ್ರೆಸ್ ಮುಖಂಡರು ಕಾಯುತ್ತಿದ್ದರು.ಅವರಿಗೆ ಸಂತೋಷ್ ಆತ್ಮಹತ್ಯೆ ಪ್ರಕರಣ ದಾಳವಾಗಿ ಸಿಕ್ಕಿದೆ.ಅದನ್ನು ಹಿಡಿದುಕೊಂಡು ಕಾಂಗ್ರೆಸ್ ನಾಯಕರು ಈಶ್ವರಪ್ಪ ರಾಜೀನಾಮೆ ಕೊಡುವಂತೆ ಮಾಡಿದ್ದಾರೆ. ಶೀಘ್ರವಾಗಿ ಅವರು ಆರೋಪ ಮುಕ್ತರಾಗಿ ಮತ್ತೆ ಸಚಿವರಾಗಲಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು.