ಮಳವಳ್ಳಿ ತಾಲ್ಲೂಕಿನ ಹಲವು ಯುವ ಮುಸ್ಲಿಂ ಮುಖಂಡರು ಬಿಜೆಪಿ ಪಕ್ಷದ ಮಳವಳ್ಳಿ ಕ್ಷೇತ್ರದ ಪ್ರಬಲ ಆಕಾಂಕ್ಷಿ ಜೆ.ಮುನಿರಾಜು ಅವರನ್ನು ಬೆಂಬಲಿಸಿ ಇಂದು ಬಿಜೆಪಿಗೆ ಸೇರ್ಪಡೆಗೊಂಡರು.
ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಮುನಿರಾಜು ಪುಷ್ಪಮಾಲೆಯನ್ನು ಹಲವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡರು.
ಯುವ ಮುಖಂಡ ಧನಗೂರು ಜುನೇದಾ ಮಾತನಾಡಿ, ನಮಗೆ ಪಾರ್ಟಿ ಮುಖ್ಯ ಅಲ್ಲ, ಮುನಿರಾಜು ಅವರು ಅಧಿಕಾರ ಇಲ್ಲದಿದ್ದರೂ ಸಹ ಗ್ರಾಮಗಳ ಸಮಸ್ಯೆಗಳಿಗೆ ಸಹಾಯ ಮಾಡುತ್ತಾ ಜಾತಿ, ಧರ್ಮ, ಪಕ್ಷ ಭೇದವಿಲ್ಲದೆ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ, ಈ ಕಾರಣಕ್ಕಾಗಿ ಅವರನ್ನು ಬೆಂಬಲಿಸುತ್ತಿದ್ದೇವೆ ಎಂದರು.
ಜೆ.ಮುನಿರಾಜು ಮಾತನಾಡಿ, ತನ್ನನ್ನು ಪಕ್ಷಾತೀತ, ಜ್ಯಾತ್ಯಾತೀತವಾಗಿ ಬೆಂಬಲಿಸುತ್ತಿರುವ ಮುಸ್ಲಿಂ ಬಾಂಧವರಿಗೆ ತಮ್ಮ ಕೃತಜ್ಞತೆ ಅರ್ಪಿಸುವುದಾಗಿ ತಿಳಿಸಿ, ಸದಾ ಅವರ ಕಷ್ಟಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಹಲಗೂರಿನ ಅಪ್ಸರ್, ಹಿಬ್ಬು, ಮಹೀಬ್, ಅಬು, ರಫೀಕ್, ಮನು ಸೇರಿದಂತೆ ನೂರಾರು ಮಂದಿ ಬಿಜೆಪಿಗೆ ಸೇರ್ಪಡೆ ಗೊಂಡರು.