Thursday, September 19, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| ಅಣ್ಣೂರು ಗ್ರಾ.ಪಂ ಅಧ್ಯಕ್ಷರಾಗಿ ಜಯಲಕ್ಷ್ಮಿಆಯ್ಕೆ

ಮದ್ದೂರು ತಾಲ್ಲೂಕು ಅಣ್ಣೂರು ಗ್ರಾಮಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜಯಲಕ್ಷ್ಮಿ, ಉಪಾಧ್ಯಕ್ಷ ಎ.ಎಚ್.ಮಂಜುಕುಮಾರ್ ಅವರನ್ನು ವಿಧಾನ ಪರಿಷತ್ ಸದಸ್ಯ ಮಧುಜಿಮಾದೇಗೌಡ ಅಭಿನಂದಿಸಿ ಗೌರವಿಸಿದರು.

ಶಾಸಕ ಮಧು ಜಿ.ಮಾದೇಗೌಡ ಮಾತನಾಡಿ, ಪಂಚಾಯಿತಿ ಅಭಿವೃದ್ದಿಗೆ ಶ್ರಮಿಸಬೇಕು. ಪಕ್ಷಾತೀತವಾಗಿ ಕೆಲಸ ಮಾಡಬೇಕು. ಆಗ ಮಾತ್ರ ತಮ್ಮ ಸ್ಥಾನಗಳಿಗೆ ಗೌರವ ಸಿಗುತ್ತದೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷ ತೊರೆದು ಸತೀಶ(ಪಿಣ್ಣ), ನಾಗರಾಜು, ಜಯಲಕ್ಷ್ಮಿ ಅವರು ಕಾಂಗ್ರೆಸ್ ಸೇರ್ಪಡೆಗೊಂಡರು.

ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಮುಖಂಡರಾದ ಬಿ.ವರದರಾಜು, ಎ.ಎಸ್.ರಾಜೀವ್, ಆರ್.ಸಿದ್ದಪ್ಪ, ಕಾರ್ಕಹಳ್ಳಿ ಸ್ವರೂಪ್ ಚಂದ್ರ, ಅಣ್ಣೂರು ಪ್ರಸನ್ನ, ಯೋಗ, ಚಂದ್ರಶೇಖರ್, ವೀರೇಂದ್ರ, ತಮ್ಮಣ್ಣ, ಆಟೋಪಾಡ್ಸ್ ವರದರಾಜು, ಬೋರೇಗೌಡ, ಮಾದೇಶ, ಶೇಖರ್, ಜಯರಾಮು, ರಾಜಣ್ಣ, ನಾಗಮಣಿ, ಹೇಮಾವತಿ, ಶಿಲ್ಪ, ಸುರೇಂದ್ರ, ಜಗದೀಶ್, ಬಾಬು, ನಟರಾಜು, ಮಧುಕುಮಾರ್, ಮಹೇಶ್ ಸೇರಿದಂತೆ ಹಲವರು ಅಭಿನಂದಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!