Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಜೆಡಿಎಸ್ ಅಭ್ಯರ್ಥಿ ಬಿ.ಆರ್.ರಾಮಚಂದ್ರುಗೆ ಆಶೀರ್ವದಿಸದ ಎಂ.ಶ್ರೀನಿವಾಸ್

ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಅವರಿಗೆ ಶಾಸಕ‌ ಎಂ.ಶ್ರೀನಿವಾಸ್ ಆಶೀರ್ವದಿಸದೆ ಕಳುಹಿಸಿದ ಘಟನೆ ಇಂದು‌ ಸಂಜೆ ನಡೆದಿದೆ.

ಮಂಡ್ಯ ನಗರದ ಜಿ.ಪಂ.ಕಚೇರಿ ಬಳಿ ಇರುವ ಶಾಸಕ ಎಂ.ಶ್ರೀನಿವಾಸ್ ಮನೆಗೆ ಜೆಡಿಎಸ್ ವರಿಷ್ಠ ದೇವೇಗೌಡರ ಪುತ್ರ ಡಾ.ಹೆಚ್.ಡಿ.ರಮೇಶ್, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್ ಮತ್ತಿತರ ಜೆಡಿಎಸ್ ನಾಯಕರೊಂದಿಗೆ ಅಭ್ಯರ್ಥಿ ರಾಮಚಂದ್ರು ಕೂಡ ತೆರಳಿದ್ದರು. ಈ ಸಂದರ್ಭದಲ್ಲಿ ರಾಮಚಂದ್ರು ಶಾಸಕ ಎಂ‌.ಶ್ರೀನಿವಾಸ್ ಅವರ ಆಶೀರ್ವಾದ ಪಡೆಯಲು‌ ಮುಂದಾದಾಗ ಅವರು ನಿರಾಕರಿಸಿದರು.ಆಗ ರಾಮಚಂದ್ರು ಅವರು ಬೇಸರದಿಂದ ಹೊರನಡೆದರು.

ಅವರೊಂದಿಗೆ ಡಾ.ಹೆಚ್.ಡಿ.ರಮೇಶ್ ಹಾಗೂ ಜಫ್ರುಲ್ಲಾ ಖಾನ್ ಕೂಡ ನಿರ್ಗಮಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!