Wednesday, September 18, 2024

ಪ್ರಾಯೋಗಿಕ ಆವೃತ್ತಿ

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಬಿಳಿಯಪ್ಪ ನೇಮಕ

ವರದಿ : ಪ್ರಭು ವಿ.ಎಸ್

ಜೆಡಿಎಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಮದ್ದೂರು ತಾಲೂಕಿನ ಅಂಕನಾಥಪುರದ ಬಿಳಿಯಪ್ಪ ಅವರನ್ನು ನೇಮಕ ಮಾಡಲಾಗಿದೆ.

ಇಂದು ಶಾಸಕ ಡಿಸಿ ತಮ್ಮಣ್ಣ ಅವರ ನಿವಾಸದಲ್ಲೇ ಬಿಳಿಯಪ್ಪ ಜೆಡಿಎಸ್ ಕಾರ್ಯಕರ್ತರು ಸನ್ಮಾನಿಸಿದರು. ಶಾಸಕ ಡಿ ಸಿ ತಮ್ಮಣ್ಣ ಮಾತನಾಡಿ, ಬಿಳಿಯಪ್ಪ ಅವರ ಸೇವೆಯನ್ನು ಪರಿಗಣಿಸಿ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ. ಇವರು ರಾಜ್ಯಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿ ದುಡಿಯುತ್ತಿದ್ದು, ಇವರ ದುಡಿಮೆಗೆ ಪಕ್ಷ ಉನ್ನತ ಸ್ಥಾನವನ್ನು ನೀಡಿದೆ ಎಂದರು .

ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿಳಿಯಪ್ಪ ಮಾತನಾಡಿ, ನನ್ನ ಸೇವೆಯನ್ನು ಪರಿಗಣಿಸಿ ಶಾಸಕರ ಸಹಕಾರದಿಂದ ನನ್ನನ್ನು ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ, ಅವರ ಗೌರವಕ್ಕೆ ಚ್ಯುತಿ ಬಾರದ ಹಾಗೇ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದರು

ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಉಪಾಧ್ಯಕ್ಷ ವೆಂಕಟೇಶ್, ಗ್ರಾಮ ಪಂಚಾಯತಿ ಅಧ್ಯಕ್ಷ ರವಿ, ತಾ.ಪಂ.ಮಾಜಿ ಸದಸ್ಯ ನಾರಾಯಣಸ್ವಾಮಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಶಂಕರಣ್ಣ, ಕೆ.ರವಿ, ನಾಗೇಶ್, ಬ್ಯಾಲದಕೆರೆ ರಾಮಚಂದ್ರ, ಮುಖಂಡರಾದ ನಗರಕೆರೆ ಸಂದೀಪ್, ಮಣಿಕಂಠ, ತೊರೆಶೆಟ್ಟಹಳಿ ರವಿ, ಲೋಕೇಶ್, ಮಹೇಶ್ ಹಡಗನಹಳ್ಳಿ, ಬೆಟ್ಟಸ್ವಾಮಿ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!