Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| 105 ಲೀಟರ್ ಕಲಬೆರಕೆ ಸೇಂದಿ ವಶ: ತಮಿಳುನಾಡು ಮೂಲದ ವ್ಯಕ್ತಿ ಬಂಧನ

ಮಂಡ್ಯ ತಾಲೂಕಿನ ಹಳೆ ಬೂದನೂರು ಗ್ರಾಮದಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ತಯಾರಿಸಲಾಗಿದ್ದ 105 ಲೀಟರ್ ಕಲಬೆರಕೆ ಸೇಂದಿಯನ್ನು ಅಬಕಾರಿ ಅಧಿಕಾರಿಗಳು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.

ಕಲಬೆರಕೆ ಸೇಂದಿ ತಯಾರಿಸಿದ್ದ ತಮಿಳುನಾಡು ಮೂಲದ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಲಬೆರಕೆ ಸೇಂದಿಯ ಜೊತೆಗೆ 5 ಕೆಜಿ 750 ಗ್ರಾಂ ಅಮೋನಿಯಂ ಸಲ್ಪೇಟ್ (Ammonium sulphate) ಪೌಡರ್, 1 ಕೆಜಿ 500 ಗ್ರಾಂ CH ಪೌಡರ್,  for industrial use only NON EDIBLE ಎಂದು ನಮೂದಾಗಿರುವ 230 ಗ್ರಾಂ ಪೌಡರ್ ಹಾಗೂ ನೊರೆ ಬರಿಸಲು ಮಿಶ್ರಣ ಮಾಡುವ ಹೆಸರು ನಮೂದು ಮಾಡದ 1 ಕೆಜಿ ಪೌಡರ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಮೈಸೂರು ಅಬಕಾರಿ ಜಂಟಿ ಆಯುಕ್ತರ ಮಾರ್ಗದರ್ಶನದಲ್ಲಿ ಮಂಡ್ಯ ಉಪ ವಿಭಾಗದ ಅಬಕಾರಿ ಉಪ ಆಯುಕ್ತರು, ಅಬಕಾರಿ ಉಪ ಅಧೀಕ್ಷಕರ ನಿರ್ದೇಶನದಲ್ಲಿ ಮತ್ತು ಅಬಕಾರಿ ನಿರೀಕ್ಷಕರು ಈ ಕಾರ್ಯಾಚರಣೆ ನಡೆಸಿದರು.  ದಾಳಿಯಲ್ಲಿ ಸಿಬ್ಬಂದಿಗಳಾದ ಗಣೇಶ ಕೆ ಪಿ, ಸುರೇಶ ಬಿ ಸಿ ಹಾಗೂ ಯಶವಂತ ಪಿ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!