ತಹಶೀಲ್ದಾರ್ ಕುಂಇ ಅಹಮದ್ ನನ್ನ ವಿರುದ್ಧ ಮಂಡ್ಯದ ಪಶ್ಚಿಮ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿ, ಎಫ್ಐಆರ್ ಮಾಡಿಸಿದ್ದಾರೆ. ಬೆದರಿಕೆ ಹಾಕಿ ನನ್ನ ಸ್ನೇಹಿತರ ಮೂಲಕ 25 ಲಕ್ಷಕ್ಕೆ ಬ್ಲಾಕ್ ಮೇಲ್ ಮಾಡಿದರು ಎಂಬ ಅಂಶಗಳು ನಿಜವೆಂದು ತಹಶೀಲ್ದಾರ್ ಕುಂಇ ಅಹಮದ್ ಅವರು ಕುರಾನ್ ಮುಟ್ಟಿ ಪ್ರಮಾಣ ಮಾಡಲಿ ಎಂದು ಆರ್ಟಿಐ ಕಾರ್ಯಕರ್ತ ಕೆ.ಆರ್.ರವೀಂದ್ರ ಸವಾಲು ಹಾಕಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಬಿಡುಗಡೆ ಮಾಡಿರುವ ರವೀಂದ್ರ, ನಾನು ತಹಶೀಲ್ದಾರ್ ಕಚೇರಿಗೆ ತೆರಳಿ ಕುಂಇ ಅಹಮದ್ ಅವರಿಗೆ ಬೆದರಿಕೆ ಹಾಕಿ, ಹಣಕ್ಕೆ ಬೇಡಿಕೆ ಇಟ್ಟಿಲ್ಲ. ಸರ್ಕಾರಿ ಆಸ್ತಿಗಳನ್ನು
ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಅಕ್ಟೋಬರ್ 13 ರಂದು ದಾಖಲೆಗಳೊಂದಿಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದೇನೆ. ಇದು ಸಂಪೂರ್ಣ ಸತ್ಯ ಎಂದು ನಾನೊಬ್ಬ ಹಿಂದುವಾಗಿ, ಹಿಂದೂ ಧರ್ಮಗ್ರಂಥ ಭಗವದ್ಗೀತೆ ಮುಟ್ಟಿ ಎಸ್ಪಿ ಕಚೇರಿಯಲ್ಲಿ ಪ್ರಮಾಣ ಮಾಡುತ್ತೇನೆ.
ತಹಶೀಲ್ದಾರ್ ಕುಂಞ ಅಹಮದ್ ಅವರು ತಮ್ಮ ಜನರೊಂದಿಗೆ ಎಸ್ಪಿ ಕಚೇರಿಗೆ ಬಂದು, ನಾನು ಬೆದರಿಕೆ ಹಾಕಿ 25 ಲಕ್ಷ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದು ಸತ್ಯ ಎಂದು ಕುರಾನ್ ಮೇಲೆ ಕೈಯಿಟ್ಟು ಪ್ರಮಾಣ ಮಾಡಲಿ ಎಂದು ಪಂಥಾಹ್ವಾನ ನೀಡಿದ್ದಾರೆ.
ಅ.14 ರಂದು ಘಟನೆ ನಡೆದಿದ್ದರೂ, ಅ.27 ರಂದು ದೂರು ನೀಡಿದ್ದಾರೆ. ಇಷ್ಟು ದಿನ ಏನು ಮಾಡ್ತಿದ್ರು ?
ಮಂಡ್ಯಕ್ಕೆ ಬರಲು 60 ಲಕ್ಷ ಹಣ ಕೊಟ್ಟಿದ್ದೇನೆ ಎಂದಿರುವ ತಹಶೀಲ್ದಾರ್ ಕುಂಇ ಅಹಮದ್ 40 ಲಕ್ಷ ಹಣ ಖರ್ಚು ಮಾಡಿ ವಿವಿಧ ಸಂಘಟನೆ ಮುಖಾಂತರ ಪ್ರತಿಭಟನೆ ಮಾಡಿಸಿರುವ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ರವೀಂದ್ರ ಒತ್ತಾಯಿಸಿದ್ದಾರೆ.