Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕೆ.ಟಿ.ಚಂದು ಅವರಿಗೆ ಒಲಿದ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ

ಸ್ವಾತಂತ್ರ್ಯ ಹೋರಾಟಗಾರ, ಬರಹಗಾರ, ಗಾಂಧಿವಾದಿ, ಕನ್ನಡಸಾಹಿತ್ಯ ಅಭಿಮಾನಿ, ಸಹಕಾರ ಸಂಘಟಕ, ಪುಸ್ತಕ ಪ್ರೇಮಿ, ರೈತ ಹೋರಾಟಗಾರ, ಪ್ರಗತಿಪರ ರೈತ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಮದ್ದೂರು ತಾಲ್ಲೂಕಿನ ಕೋಣಸಾಲೆ ಗ್ರಾಮದ ಕೆ.ಟಿ.ಚಂದು ಅವರ ಸಮಾಜಸೇವಾ ಕಾರ್ಯವನ್ನು ಗುರುತಿಸಿ  ರಾಜ್ಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ದಿನಾಂಕ 22-10-1930 ರಂದು ಕೋಣಸಾಲೆಯ ಪಟೇಲ್ ತಮ್ಮಣ್ಣಗೌಡ ಲಿಂಗಮ್ಮ ದಂಪತಿಯ 4 ಜನ ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳ ಕುಟುಂಬದಲ್ಲಿ ಎರಡನೇ ಒಡಲ ಕೂಡಿಯಾಗಿ ಕೆ. ಟಿ. ಚಂದು ಜನಿಸಿದರು. ಎಚ್.ಕೆ.ವೀರಣ್ಣಗೌಡ, ತಾಯಮ್ಮ ದಂಪತಿಗಳು ಪ್ರೀತಿಯಿಂದ ಹರಸಿ ಹಾರೈಸಿ ಇಟ್ಟ ಹೆಸರು ಕೆ. ಟಿ ಚಂದ್ರಮೌಳಿ ನಂತರ ರೂಢಿಗತವಾಗಿ ಇವರನ್ನು ಕೆ. ಟಿ.ಚಂದು ಎಂದು ಕರೆಯಲಾಯಿತು.

ಸೇವೆ ಮತ್ತು ಕಾರ್ಯ ಚಟುವಟಿಕೆಗಳಿಂದ ಈ ಭಾಗದ ಜನರಿಗೆ ಅವರು ಪರಿಚಿತರಾಗಿದ್ದು ತಮ್ಮ ಸರಳ-ಸಜ್ಜನ, ಮುಗ್ಧ ಮನಸು, ನಯಾ-ವಿನಯದಂತಹ ಸಚ್ಚಾರಿತ್ರ್ಯ ಗುಣಗಳಿಂದಾಗಿ ಜನ ‘ಚಂದು ಅಣ್ಣ’ ಎಂದು ಕರೆಯುತ್ತಾರೆ. ಕೆ. ಟಿ. ಚಂದು ಅವರು ತಮ್ಮ 91ರ ವಯಸ್ಸಿನಲ್ಲಿ ರಾಜ್ಯೋತ್ಸವ ಗೌರವಕ್ಕೆ ಪಾತ್ರರಾಗಿ ಮಂಡ್ಯ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಕೆಟಿ ಚಂದು ಅವರ ಸೇವಾ ಕ್ಷೇತ್ರಗಳು

  • 1947- ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿ
  • 1965- ಎಂ ಹೆಚ್ ಚನ್ನೇಗೌಡ ವಿದ್ಯಾನಿಲಯ ಸ್ಥಾಪನೆ ಸ್ಥಾಪಕ ಕಾರ್ಯದರ್ಶಿಯಾಗಿ ನಿರಂತರ ಸೇವೆ, ಪ್ರಸ್ತುತ ಗೌರವಾಧ್ಯಕ್ಷರು.
  • 1971- ತೆಂಗಿನಕಾಯಿ ಮಂಡಳಿ ರಾಜ್ಯ ಸಮಿತಿ ಸದಸ್ಯರಾಗಿ ಆಯ್ಕೆ
  • 1963-71 ಮದ್ದೂರು ತಾಲೂಕು ವ್ಯವಸಾಯ ಉತ್ಪನ್ನಗಳ ಸಹಕಾರಿ ಅಧ್ಯಕ್ಷರಾಗಿ ಆಯ್ಕೆ
  • 1971-ಬೆಂಗಳೂರು ಹಾಲು ಉತ್ಪಾದಕರ ಸಂಘ ಯೂನಿಯನ್ ಮಂಡಳಿ ಸದಸ್ಯರಾಗಿ ಆಯ್ಕೆ
  • 1971-ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಂಘಟನೆ
  • 1971-ರಾಜ್ಯದಲ್ಲೇ ಪ್ರಥಮ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮದ್ದೂರಿನಲ್ಲಿ ಸಂಘಟನೆ
  • 1971-79 ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ
  • 1974- ಕರ್ನಾಟಕ ರಾಜ್ಯ ರೈತ ಮತ್ತು ರೈತ ಕಾರ್ಮಿಕ ಸಂಘ ಸಂಘಟನಾ ಕಾರ್ಯದರ್ಶಿ
  • 1975- ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂಘಟನೆ
  • 1974-80- ಮದ್ದೂರು ಪುರಸಭೆ ಅಧ್ಯಕ್ಷ
  • 1977- ವರುಣ ನಾಲಾ ಚಳುವಳಿ ತಾಲೂಕು ಕಾರ್ಯದರ್ಶಿ
  • 1995- ಮದ್ದೂರಿನಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ರೂವಾರಿ
  • 1974- ಜಿಲ್ಲಾ ಶಿಕ್ಷಕರ ಆಯ್ಕೆಸಮಿತಿಯ ಸದಸ್ಯನ ಸೇವೆ
  • 2003- ಜಿಲ್ಲಾ ಆಡಳಿತದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
  • 2012- ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ
  • 1980-2000- ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮಂಡ್ಯದ ನಿರ್ದೇಶಕರು, ಹೆಚ್.ಕೆ ವೀರಣ್ಣಗೌಡರ ಮಾರ್ಗದರ್ಶನದೊಡನೆ ಸಂಸ್ಥಾಪಕ ಕಾರ್ಯದರ್ಶಿಗಳಾಗಿ ಪ್ರಸ್ತುತ ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
  • 1965- ಜವಾಹರ್ ಪ್ರೌಢಶಾಲೆ ಮದ್ದೂರು
  • 1967- ಕಮಲ ನೆಹರು ಬಾಲಕಿಯರ ಪ್ರೌಢಶಾಲೆ, ಮದ್ದೂರು
  • 1969- ಕಸ್ತೂರಿಬಾ ಉನ್ನತ ಪ್ರಾಥಮಿಕ ಶಾಲೆ ಮದ್ದೂರು
  • 1970-71 ಅರ್ಜುನ ಪುರಿ ಕಲೆ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಮದ್ದೂರು
  • 1978- ಎಚ್ ಕೆ ವೀರಣ್ಣಗೌಡ ಪದವಿ ಕಾಲೇಜು, ಮದ್ದೂರು
  • 2000- ಡಾ.ಎಚ್ ಕೆ ಮರಿಯಪ್ಪ ಕಾನ್ವೆಂಟ್ ಮದ್ದೂರು
  • 2013-ಡಾ.ಶಾಂತ ಮರಿಯಪ್ಪ ಪಬ್ಲಿಕ್ ಸ್ಕೂಲ್ ಮದ್ದೂರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!