Friday, September 20, 2024

ಪ್ರಾಯೋಗಿಕ ಆವೃತ್ತಿ

ಸಾಕು ನಾಯಿಯನ್ನು ತಿಂದು ಹಾಕಿದ ಚಿರತೆ

ಮಳವಳ್ಳಿ ತಾಲ್ಲೂಕಿನಲ್ಲಿ ಚಿರತೆ ಹಾವಳಿಯು  ನಿರಂತರವಾಗಿ ನಡೆಯುತ್ತಿದ್ದು ತೋಟದಲ್ಲಿ ಸಾಕಿದ ನಾಲ್ಕು ನಾಯಿಗಳ ಮೇಲೆ ಏಕಕಾಲದಲ್ಲಿ ಚಿರತೆ ದಾಳಿ ನಡೆಸಿ, ಒಂದು ಸಾಕು ನಾಯಿಯನ್ನು ತಿಂದು ಹಾಕಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಐನೋರುಹುಂಡಿ ಗ್ರಾಮದ ಬಳಿ ನಡೆದಿದೆ

ಮಹೇಶ ಕುಮಾರ್ ಎಂಬುವವರ ತೋಟದಲ್ಲಿ ಸಾಕಿದ್ದ ನಾಲ್ಕು ನಾಯಿಗಳ ಮೇಲೆ ಚಿರತೆಯೂ ದಾಳಿ ನಡೆಸಿ ಒಂದು ಎಳೆದುಕೊಂಡು ಹೋಗಿತ್ತು.

ಈ ಭಾಗದಲ್ಲಿ ಚಿರತೆ ಹಾವಳಿ ಇದೆ ಅಂತ ಅರಣ್ಯ ಇಲಾಖೆಗೆ ಗೊತ್ತಿದ್ದರೂ ಯಾವುದೇ ಕ್ರಮಕೈಗೊಳ್ಳದೇ ಇರುವುದರಿಂದ ಈ ಅನಾಹುತ ಸಂಭವಿಸಿದೆ. ನಮ್ಮ ತೋಟದ ಪಕ್ಕದಲ್ಲಿ ಇಂದಿರಾಗಾಂಧಿ ವಸತಿ ಶಾಲೆ ಇದ್ದು, ತಾಲ್ಲೂಕಿನ ಎಲ್ಲಾ ಭಾಗದ ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದರಿಂದ ಅದಷ್ಟು ಬೇಗ ಚಿರತೆಯನ್ನು  ಸೆರೆಯಿಡಿಸುವಂತೆ ತೋಟದ ಮಾಲೀಕ ಮಹೇಶಕುಮಾರ್ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!