ಪಾಂಡವಪುರ ತಾಲೂಕಿನ ಗಿರಿಯಾರಹಳ್ಳಿ ಗ್ರಾಮದಲ್ಲಿ ಮನೆಯ ಹಿಂದೆ ಇದ್ದ ಕುರಿ ಕೊಟ್ಟಿಗೆಗೆ ಮೇಲೆ ಚಿರತೆಗಳ ಹಿಂಡು ದಾಳಿ ಮಾಡಿ 6 ಮೇಕೆಗಳನ್ನು ಸಾಯಿಸಿ, 4 ಮೇಕೆಗಳನ್ನು ಹೊತ್ತೊಯ್ದಿರುವ ಭಾನುವಾರ ಮಧ್ಯರಾತ್ರಿ ನಡೆದಿದೆ.
ಗ್ರಾಮದ ನಿವಾಸಿ ನಾಗೇಗೌಡ ಎಂಬುವರ ಮನೆಯ ಹಿಂದೆ ಇದ್ದ ಕುರಿ ಕೊಟ್ಟಿಗೆಯಲ್ಲಿ 20 ಆಡುಗಳನ್ನು ಸಾಕಲಾಗಿತ್ತು. ತಡರಾತ್ರಿ ಕೊಟ್ಟಿಗೆಗೆ ಮೂರ್ನಾಲ್ಕು ಚಿರತೆಗಳು ಒಟ್ಟಿಗೆ ದಾಳಿ ಮಾಡಿ 20ಕುರಿಗಳಲ್ಲಿ ಆರು ಕುರಿಗಳನ್ನು ಸಾಯಿಸಿ 4 ಅಡುಗಳನ್ನು ಹೊತ್ತೊಯ್ದಿವೆ. ಸ್ಥಳಕ್ಕೆ ಶಾಸಕ ಸಿ.ಎಸ್. ಪುಟ್ಟರಾಜು ಸೇರಿ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಾಸಕ ಸಿ.ಎಸ್.ಪುಟ್ಟರಾಜು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಕ್ತ ಕ್ರಮವಹಿಸಿ ಮೇಕೆ ಮಾಲೀಕನಿಗೆ ಸೂಕ್ತ ಪರಿಹಾರ ಸೇರಿದಂತೆ ಗ್ರಾಮದಲ್ಲಿ ಚಿರತೆಗಳನ್ನು ಸೆರೆ ಹಿಡಿಯಲು ಬೋನುಗಳನ್ನು ಅಳವಡಿಸುವಂತೆ ಸೂಚಿಸಿದ್ದಾರೆ.
ಭಯ ಭೀತರಾದ ಗ್ರಾಮಸ್ಥರು
ಒಟ್ಟಿಗೆ ಹತ್ತು ಮೇಕೆಗಳನ್ನು ಭೇಟಿಯಾಡಿರುವ ಚಿರತೆಗಳ ಹಿಂಡಿನಿದಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇಂದೆಂದೂ ಇಂತಹ ಪ್ರಕರಣಗಳು ನಡೆದಿರಲಿಲ್ಲ, ಆದರೆ ಚಿರತೆಗಳು ಸುಮಾರು 10 ಮೇಕೆಗಳನ್ನು ಸಾಯಿರುವುದರಿಂದ ಎಷ್ಟು ಚಿರತೆಗಳು ದಾಳಿ ಮಾಡಿರಬಹುದು ಎಂಬುದೇ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಆದ್ದರಿಂದ ಜನ-ಜಾನುವಾರುಗಳಿಗೆ ಸೂಕ್ತ ರಕ್ಷಣೆ ಒದಗಿಸಿ, ಚಿರತೆಗಳನ್ನು ಸೆರೆಯಿಡಿಯುವಂತೆ ಆಗ್ರಹಿಸಿದ್ದಾರೆ.