ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೆ ಚಿರತೆಯೊಂದು ಸಾವಿಗೀಡಾಗಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಬಾಚಹಳ್ಳಿ ಬಳಿ ನಡೆದಿದೆ.
ಬಾಚಹಳ್ಳಿ ಬಳಿಯ ಮಳವಳ್ಳಿ- ಕೊಳ್ಳೆಗಾಲ ಹೆದ್ದಾರಿಯನ್ನು ಚಿರತೆ ದಾಟುವಾಗ ವೇಗವಾಗಿ ಬಂದು ಕಾರು ಗುದ್ದಿದ ಪರಿಣಾಮ ಚಿರತೆಯು ರಸ್ತೆ ಬದಿಗೆ ಬಿದ್ದು ಒದ್ದಾಡಿ ಪ್ರಾಣ ಬಿಟ್ಟಿದೆ, ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ, ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.