Monday, September 16, 2024

ಪ್ರಾಯೋಗಿಕ ಆವೃತ್ತಿ

ವಿಶ್ವಮಾನವ ವಿದ್ಯಾಸಂಸ್ಥೆಯಲ್ಲಿ ಅಕ್ಷರಭ್ಯಾಸ ಕಾರ್ಯಕ್ರಮ

ಮಂಡ್ಯ ತಾಲೂಕಿನ ಕೊಮ್ಮೆರಹಳ್ಳಿ ಗ್ರಾಮದ ವಿಶ್ವಮಾನವ ವಿದ್ಯಾಸಂಸ್ಥೆಯ ಆವರಣದಲ್ಲಿ ಸಾಂಸ್ಕೃತಿಕ ಹಾಗೂ ಅಕ್ಷರಭ್ಯಾಸ ಕಾರ್ಯಕ್ರಮ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ನಡೆಯಿತು.

ಮಗುವಿನ ಭವಿಷ್ಯಕ್ಕೆ ಕಾರಣೀಭೂತರಾದ ಪೋಷಕರು, ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಸರಿಯಾದ ಸಮಯದಲ್ಲಿ ಸರಿಯಾದ ನಿಲುವನ್ನು ತಾಳಬೇಕು ಎಂದು ನಿರ್ಮಲಾನಂದಶ್ರೀ ಸಲಹೆ ನೀಡಿದರು.

ಜ್ಞಾನದ ಬೀಜ ಬಿತ್ತುವ ಕೆಲಸ, ಭತ್ತದ ಬೆಳೆಯಂತೆ ಎಂಬುದನ್ನು ಉದಾಹರಣೆ ಕೊಟ್ಟು ಅರ್ಥಗರ್ಭಿತವಾಗಿ ತಿಳಿಸಿದರು. ಪೋಷಕರು ಮಕ್ಕಳ ಮುಂದೆ ಜಗಳವದುವುದನ್ನು ಬಿಟ್ಟು, ಒಳ್ಳೆಯ ಮಾತುಗಳನ್ನಷ್ಟೇ ಆಡಬೇಕು ಮತ್ತು ಮನೆಯ ವಾತಾವರಣವನ್ನು ಉತ್ತಮವಾಗಿಟ್ಟುಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಿಡಿಪಿಐ ಶಿವರಾಮೇಗೌಡ, ಶ್ರೀಪುರುಷೋತ್ತಮನಾಥನಂದ ಸ್ವಾಮೀಜಿ, ಸಿಇಓ ಡಾ. ಎನ್. ಶಿವರಾಮರೆಡ್ಡಿ ಸೇರಿದಂತೆ ಇನ್ನಿತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!