Thursday, September 19, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು | ಅಂತಿಮ ಕಣದಲ್ಲಿ 10 ಅಭ್ಯರ್ಥಿಗಳ ಚುನಾವಣಾ ಸ್ಪರ್ಧೆ

ವರದಿ : ಪ್ರಭು ವಿ.ಎಸ್.

ಮೇ.10ರಂದು ನಿಗಧಿಯಾಗಿರುವ ವಿಧಾನಸಭಾ ಚುನಾವಣೆ ವೇಳೆ ಮದ್ದೂರು ಕ್ಷೇತ್ರದಿಂದ ಸಲ್ಲಿಕೆಯಾಗಿದ್ದ 12 ನಾಮಪತ್ರಗಳ ಪೈಕಿ ಇಬ್ಬರು ಪಕ್ಷೇತರ ಉಮೇದುವಾರರು ತಮ್ಮ ನಾಮಪತ್ರ ವಾಪಸ್ ಪಡೆದಿದ್ದು ಅಂತಿಮವಾಗಿ 10 ಮಂದಿ ಕಣದಲ್ಲಿ ಉಳಿದಿದ್ದಾರೆ.

ನಾಮಪತ್ರ ವಾಪಸ್ಸಾತಿಗೆ ಅಂತಿಮ ದಿನವಾದ ಸೋಮವಾರ ಪಕ್ಷೇತರ ಅಭ್ಯರ್ಥಿಗಳಾದ ಸಿ. ಪ್ರಕಾಶ್ ಮತ್ತು ಸಿ.ಟಿ. ಬಿರೇಶ್ ತಮ್ಮ ಉಮೇದುವಾರಿಕೆಯನ್ನು ವಾಪಸ್ ಪಡೆದಿದ್ದಾರೆ.

10 ಮಂದಿ ಕಣದಲ್ಲಿ :
ಅಂತಿಮವಾಗಿ ಆನಂದ್ (ಎಎಪಿ) ಕೆ.ಎಂ. ಉದಯ್ (ಇಂಡಿಯನ್ ನ್ಯಾಷಿನಲ್ ಕಾಂಗ್ರೆಸ್) ಡಿ.ಸಿ. ತಮ್ಮಣ್ಣ (ಜೆಡಿಎಸ್) ಸೋಮನಹಳ್ಳಿ ಶಿವಕುಮಾರ್ (ಬಿಎಸ್‌ಪಿ) ಎಸ್.ಪಿ. ಸ್ವಾಮಿ (ಬಿಜೆಪಿ) ಕೆ.ಜೆ. ಮಹೇಶ್ (ಕರ್ನಾಟಕ ರಾಷ್ಟ್ರ  ಸಮಿತಿ) ಕಣದಲ್ಲಿದ್ದಾರೆ.

ಪಕ್ಷೇತರರರಾಗಿ ಚಿಕ್ಕನಂಜಾಚಾರಿ, ಕೆ.ಎಸ್. ಪ್ರಜ್ವಲ್‌ಗೌಡ, ಮನೋಹರ್, ಮಂಜುನಾಥ್ ಸ್ಪರ್ಧಾ ಕಣದಲ್ಲಿರುವುದಾಗಿ ಮದ್ದೂರು ವಿಧಾಸಭಾ ಕ್ಷೇತ್ರದ ಚುನಾವಣಾಧಿಕಾರಿ ಆರ್. ನಾಗರಾಜು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!