ಮಳವಳ್ಳಿ ಪಟ್ಟಣದಲ್ಲಿ ಟ್ಯೂಷನ್ ಗೆ ಹೋಗಿದ್ದ ಮುಗ್ದ ಬಾಲಕಿಯನ್ನು ಕಾಮುಕನೊಬ್ಬ ಅತ್ಯಾಚಾರ ಮಾಡಿ ಕೊಲೆ ಮಾಡಿದ ಘಟನೆಯಿಂದ ಇಡೀ ಮಳವಳ್ಳಿ ಜನತೆ ದುಃಖತಪ್ತರಾಗಿ ಪಕ್ಷಬೇದ ಮರೆತು ಘಟನೆ ಖಂಡಿಸಿ ನೊಂದ ಕುಟುಂಬದ ಜೊತೆ ನಿಂತಿದ್ದಾರೆ.
ಆದರೆ ಘಟನೆ ನಡೆದು ಎರಡು ದಿನ ಕಳೆದರೂ ಮಂಡ್ಯ ಸಂಸದೆ ಸುಮಲತಾ ಮೇಡಂ ಅವರು ಮಾತ್ರ ಘಟನೆಯನ್ನು ಖಂಡಿಸಲೂ ಇಲ್ಲ, ನೊಂದ ಕುಟುಂಬಸ್ಥರನ್ನು ಭೇಟಿ ಮಾಡಲೂ ಇಲ್ಲ. ಇದರಿಂದಾಗಿ ಚುನಾವಣೆಯ ಸಮಯದಲ್ಲಿ ಮಳವಳ್ಳಿ ಹುಚ್ಚೇಗೌಡರ ಸೊಸೆ ಎಂದು ಹೇಳಿದ್ದು ಕೇವಲ ಸಿನಿಮಾ ಡೈಲಾಗ್ ರೀತಿಯ ಡೈಲಾಗ್ ಡೆಲಿವರಿ ಮಾತ್ರವೇ ಎನ್ನುವ ಚರ್ಚೆ ಶುರುವಾಗಿದೆ.