Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯದ ರೈತ ಚಳವಳಿಗೆ ಮದ್ದೂರು ಪ್ರಗತಿಪರ ಸಂಘಟನೆಗಳ ಬೆಂಬಲ

ಕಬ್ಬಿಗೆ ಬೆಂಬಲ ಬೆಲೆ ನಿಗದಿಗೊಳಿಸದ ಸರ್ಕಾರದ ಕ್ರಮ ಖಂಡಿಸಿ, ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಮಂಡ್ಯದ ಸರ್.ಎಮ್.ವಿಶ್ವೇಶ್ವರಯ್ಯ ಪ್ರತಿಮೆ ಎದುರು ನಡೆಯುತ್ತಿರುವ ಆಹೊ ರಾತ್ರಿ ಧರಣಿಗೆ ಮದ್ದೂರಿನ ಪ್ರಗತಿಪರ ಸಂಘಟನೆಗಳ ಒಕ್ಕೂಟ ಬೆಂಬಲ ವ್ಯಕ್ತಪಡಿಸಿದೆ.

ಇದೇ ನವೆಂಬರ್ 12 ರಂದು ಶನಿವಾರ ರೈತ ಚಳವಳಿಯಲ್ಲಿ ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ

ಪ್ರತಿಭಟನೆಯಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಧ್ಯಕ್ಷರಾದ ರಮೇಶ್ ಗೌಡ ಜಿಲ್ಲಾಧ್ಯಕ್ಷ ವಿ ಸಿ ಉಮಾಶಂಕರ್, ಮದ್ದೂರು ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್, ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಚನ್ಮಸಂದ್ರ ಲಕ್ಷ್ಮಣ, ಹಾಲು ಉತ್ಪಾದಕರ ಸಂಘದ ತಾಲೂಕು ಆಧ್ಯಕ್ಷ ಜಿ.ಕೆ ರಾಜು, ಗ್ರಾಮಪಂಚಾಯುತ್ ಸದಸ್ಯರ ಒಕ್ಕೂಟದ ಗೌರವಾಧ್ಯಕ್ಷ ವಳಗೆರೆಹಳ್ಳಿ ದಯಾನಂದ್

ಪ್ರಗತಿಪರ ಸಂಘಟನೆಯ ಸಂಚಾಲಕ ಶ್ರೀ ಕ.ಶ್ರೀನಿವಾಸ್, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಕಾರ್ಯದರ್ಶಿ ಹಾಗಲಹಳ್ಳಿ ಬಸವರಾಜ್, ಸಾಹಿತ್ಯ ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕ್ರಾಂತಿಸಿಂಹ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ಕಾರ್ಯದರ್ಶಿ ಸುರೇಶ್ ಚುಂಚಗಹಳ್ಳಿ, ಮಾದರಹಳ್ಳಿ ಗ್ರಾ ಪಂ ಸದಸ್ಯ ಮಚಶೆಟ್ಟಿ, ಪ್ರಗತಿಪರಚಿಂತಕರಾದ ಹಾಗಲಹಳ್ಳಿ ಶಿವಲಿಂಗೇಗೌಡ, ಹುಲಿಗೆರೆ ಪುರ ರವಿ, ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಸೊಂಪುರ ಉಮೇಶ್, ಚಾಕನಹಳ್ಳಿ ಸಾಗರ್, ಯರಗನಹಳ್ಳಿ ಮಹಲಿಂಗು, ಚಾಮನಹಳ್ಳಿ ರಾಮಯ್ಯ, ಚನ್ನಸಂದ್ರ ವಿವೇಕ್ ಸೇರಿದಂತೆ ಹಲವು ಹೊರಾಟಗಾರರು ಭಾಗವಹಿಸಲಿದ್ದಾರೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!