ಜೆಡಿಎಸ್ ಪಕ್ಷದಿಂದ ಮೂರು ಬಾರಿ ಗೆದ್ದು ಎಂಎಲ್ಎ ಆಗಿದ್ದ,ಜಿಲ್ಲೆಯಲ್ಲಿ ಪಕ್ಷ ಬೆಳೆಸಿದ್ದ ಜೆಡಿಎಸ್ ಹಿರಿಯ ನಾಯಕ ಎಂ.ಶ್ರೀನಿವಾಸ್ ಅವರ ಹೆಸರನ್ನು ಆರು ತಿಂಗಳ ಮುಂಚೆ ಘೋಷಿಸಿದ್ದ ಜೆಡಿಎಸ್,ನಾಮಪತ್ರ ಸಲ್ಲಿಕೆಗೆ ಒಂದು ದಿನ ಇದ್ದಂತೆ ದಿಢೀರ್ ಎಂದು ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಅವರಿಗೆ ಬಿ.ಫಾರಂ ನೀಡುವ ಮೂಲಕ ಎಂ.ಶ್ರೀನಿವಾಸ್ ಆಕ್ರೋಶಕ್ಕೆ ಕಾರಣವಾಗಿದೆ.
ಜೆಡಿಎಸ್ ವರಿಷ್ಠರ ಈ ನಡೆ ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ನಾಯಕರು ಮಾಡಿದಂತೆ ಶಾಸಕ ಎಂ.ಶ್ರೀನಿವಾಸ್ ಅವರಿಗೆ ಹೆಚ್.ಡಿ.ಕುಮಾರಸ್ವಾಮಿ ಮಾಡಿದ್ದಾರೆ ಎಂದು ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.
ಮನ್ಮುಲ್ ಅಧ್ಯಕ್ಷ ಜ್ಯೂನಿಯರ್ ರಾಮಚಂದ್ರುಗೆ ಬಿ.ಫಾರಂ ನೀಡುವುದರ ಮೂಲಕ ಶ್ರೀನಿವಾಸ್ ಅವರಿಗೆ ಅನ್ಯಾಯ ಮಾಡಿದ ಜೆಡಿಎಸ್ ವರಿಷ್ಟರ ನಡೆ ಖಂಡನೀಯ ಎಂದು ಜೆಡಿಎಸ್ ಕಾರ್ಯಕರ್ತರೇ ಮಾತನಾಡಿ ಕೊಳ್ಳುತ್ತಿದ್ದಾರೆ.
ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ ಅವರಿಗೆ ಆದ ರೀತಿ ಎಂ.ಶ್ರೀನಿವಾಸ್ ಅವರಿಗೆ ಆಗಿದೆ ಎಂಬ ಮಾತು ಕ್ಷೇತ್ರದಲ್ಲಿ
ಕೇಳಿ ಬರುತ್ತಿದೆ.
ನಾಮಪತ್ರ ಸಲ್ಲಿಕೆಗೆ ಒಂದು ದಿನ ಇರುವಾಗ ದಿಢೀರ್ ಎಂದು ಬಿ.ಆರ್.ರಾಮಚಂದ್ರು ಅವರಿಗೆ ಬಿ.ಫಾರಂ ನೀಡುವ ಮೂಲಕ ಹಾಲಿ ಶಾಸಕ ಎಂ.ಶ್ರೀನಿವಾಸ್ ಆಕ್ರೋಶಕ್ಕೆ ಕಾರಣವಾಗಿದ್ದಾರೆ ದಳಪತಿಗಳು.ಇದು ಯಾವ ರೀತಿಯ ಬಂಡಾಯಕ್ಕೆ ಕಾರಣವಾಗುವುದೋ ಎಂದು ನಾಳೆ ತಿಳಿಯಲಿದೆ.