ಅರೆ ಹುಚ್ಚನ ಬಗ್ಗೆ ನಾನು ಮಾತಾಡಲ್ಲ, ಆತನ ಬಗ್ಗೆ ಮಾತನಾಡಿದ್ರೆ ತಾಯಿ ಭುವನೇಶ್ವರಿ ಕೂಡ ಒಪ್ಪಲ್ಲ ಎಂದು ಬಿಜೆಪಿಯ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಮಂಡ್ಯ ಶಾಸಕ ರವಿಕುಮಾರ್ ಗಣಿಗ ತಿರುಗೇಟು ನೀಡಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲದ ಬಗ್ಗೆ ಇನ್ನೆರಡು ದಿನಗಳಲ್ಲಿ ತಿಳಿಸುತ್ತೇನೆಂದು ಹೇಳಿಕೆ ನೀಡಿದ್ದ ಬಗ್ಗೆ ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಅವರು, ಇವತ್ತು ನಾಡಿನಲ್ಲಿ ಕನ್ನಡ ರಾಜ್ಯೋತ್ಸವ ಇದೆ. ಈ ಸಂದರ್ಭದಲ್ಲಿ ಅರೆ ಹುಚ್ಚನ ಬಗ್ಗೆ ಮಾತನಾಡಲ್ಲ, ಸಮಯ ಬಂದಾಗ ನಾನೇ ತಿಳಿಸುತ್ತೇನೆ ಎಂದರು.