Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯದ ‘ಕಿರಣ್ ರಾಜ್’ ಅತ್ಯುತ್ತಮ ನಿರ್ದೇಶಕ

ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಇತ್ತೀಚೆಗೆ ಧಾರವಾಡದಲ್ಲಿ ನಡೆದ ಉತ್ತರ ಕರ್ನಾಟಕ ಅಂತರಾಷ್ಟ್ರೀಯ ಕಿರು ಚಲನಚಿತ್ರೋತ್ಸವ-2022 ಕಾರ್ಯಕ್ರಮದಲ್ಲಿ ಮಂಡ್ಯದ ಯುವ ಪ್ರತಿಭೆಯೊಂದು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದು ಜಿಲ್ಲೆಗೆ ಕೀರ್ತಿ ತಂದಿದೆ.

ಮಂಡ್ಯ ತಾಲ್ಲೂಕಿನ ಸಾತನೂರು ಗ್ರಾಮದ ಕಿರಣ್ ರಾಜ್ ಈ ಪ್ರಶಸ್ತಿಗೆ ಪಾತ್ರವಾದ ಯುವ ನಿರ್ದೇಶಕ. ತಮ್ಮ ”ಲಾಟರಿ ಟಿಕೆಟ್” ಕಿರುಚಿತ್ರದ ನಿರ್ದೇಶನಕ್ಕಾಗಿ ಈ ಪ್ರಶಸ್ತಿ ಪಡೆದಿದ್ದಾರೆ.

ಮಂಡ್ಯ ಜಿಲ್ಲೆಯು  ಹಲವಾರು ನಿರ್ದೇಶಕರು, ನಾಯಕ-ನಟರು ಹಲವು ಸಾಧಕರನ್ನು ಕನ್ನಡ ಚಿತ್ರರಂಗಕ್ಕೆ ನೀಡಿದೆ. ಆದರೆ ಕಿರುಚಿತ್ರ ನಿರ್ದೇಶನ ವಿಭಾಗದಲ್ಲಿ ಸಾತನೂರು ಕಿರಣ್ ರಾಜ್ ಮಾಡಿರುವ ಸಾಧನೆಯನ್ನು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ಶ್ಲಾಘಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!