Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಾರಮ್ಮ ದೇವಸ್ಥಾನಕ್ಕೆ 1.50 ಲಕ್ಷ ದೇಣಿಗೆ ನೀಡಿದ ಇಂಡುವಾಳು ಸಚ್ಚಿದಾನಂದ

ಶ್ರೀರಂಗಪಟ್ಟಣ ತಾಲ್ಲೂಕಿನ ಕೆ. ಶೆಟ್ಟಹಳ್ಳಿ ಗ್ರಾಮದ ಗ್ರಾಮದೇವತೆ ಶ್ರೀ ಮಾರಮ್ಮ ದೇವಾಲಯ ಜೀರ್ಣೋದ್ಧಾರಕ್ಕೆ ಯುವ ನಾಯಕ ಇಂಡುವಾಳು ಎಸ್.ಸಚ್ಚಿದಾನಂದ 1.50 ಲಕ್ಷ ದೇಣಿಗೆ ನೀಡಿದರು.

ಇಂದು ಮಾರಮ್ಮ ದೇವಾಲಯಕ್ಕೆ ಆಗಮಿಸಿದ ಸಚ್ಚಿದಾನಂದ ದೇವರ ದರ್ಶನ ಪಡೆದು, ನ.3ರಂದು ನಡೆಯುವ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಕೋರಿ ದೇವಸ್ಥಾನದ ಪದಾಧಿಕಾರಿಗಳಿಗೆ 1.50 ಲಕ್ಷ ರೂ.ಗಳ ಚೆಕ್ ನೀಡಿದರು.

ಈ ಸಂದರ್ಭದಲ್ಲಿ ಮಂಡ್ಯ ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು, ಜಿ.ಪಂ.ಮಾಜಿ ಸದಸ್ಯ ಲಿಂಗರಾಜು,ಕೆ.ಶೆಟ್ಟಿಹಳ್ಳಿ ಗ್ರಾ.ಪಂ.ಅಧ್ಯಕ್ಷ ಬೋರೇಗೌಡ, ಮುಖಂಡರಾದ ಟಿ.ಶ್ರೀಧರ್, ಶ್ರೀಕಾಂತ್, ರೇವಣ್ಣ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!