ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಗ್ರಾಮಕ್ಕೆ ಪಂಚರತ್ನ ಯಾತ್ರೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥನೊಬ್ಬ ಶಾಸಕ ಅನ್ನದಾನಿ ನಮ್ಮ ಗ್ರಾಮಕ್ಕೆ ಬಂದಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ದೂರು ನೀಡಿದ ಘಟನೆ ನಡೆಯಿತು.
ಬೆಳಕವಾಡಿ ಗ್ರಾಮಕ್ಕೆ ಬಂದ ಕುಮಾರಸ್ವಾಮಿ ಭಾಷಣ ಆರಂಭಿಸುವ ಸಂದರ್ಭದಲ್ಲಿ ಗ್ರಾಮಸ್ಥರೊಬ್ಬರು ಶಾಸಕ ಅನ್ನದಾನಿ ನಮ್ಮೂರಿಗೆ ಕೇವಲ ಎರಡೇ ಸಲ ಬಂದಿರೋದು.ಯಾವುದೇ ಸಭೆ, ಸಮಾರಂಭಕ್ಕೂ ಬಂದಿಲ್ಲ.ಗ್ರಾಮದಲ್ಲಿನ ಸಹಕಾರ ಸಂಘಗಳ ವಾರ್ಷಿಕ ಸಭೆಗೂ ಬಂದಿಲ್ಲ.
ನೀವೇ ನಿಮ್ಮ ಶಾಸಕರಿಗೆ ಸ್ವಲ್ಪ ಬುದ್ಧಿ ಹೇಳಿ ಎಂದು ದೂರು ನೀಡಿದರು.