ಶ್ರೀರಂಗಪಟ್ಟಣ ತಾಲೂಕಿನ ತಡಗವಾಡಿ ಗ್ರಾಮಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಲು ಬಂದ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ಕೆಲವು ಯುವಕರ ನಡುವೆ ವಾಕ್ಸಮರ ನಡೆಯಿತು.
ತಡಗವಾಡಿ ಗ್ರಾಮದ ಕೆಲವು ಯುವಕರು ರವೀಂದ್ರ ಶ್ರೀಕಂಠಯ್ಯ ಹಲವು ದಿನಗಳ ನಂತರ ಗ್ರಾಮಕ್ಕೆ ಬಂದಿದ್ದಾರೆ. ಇಷ್ಟು ದಿನ ಯಾಕೆ ಬರಲಿಲ್ಲ ಎಂದೆಲ್ಲ ಪ್ರಶ್ನೆ ಮಾಡಿದರು. ಕೆಲವರ ವರ್ತನೆಯಿಂದ ಒಂದು ಹಂತದಲ್ಲಿ ಕೋಪಗೊಂಡ ರವೀಂದ್ರ ಶ್ರೀಕಂಠಯ್ಯ ನನಗೆ ಮತ ಹಾಕಲು ಇಷ್ಟವಿದ್ದರೆ ಹಾಕಿ, ಇಲ್ಲದಿದ್ದರೆ ನಿಮ್ಮ ಮತವೇ ನನಗೆ ಬೇಡ ಎಂದು ಏರು ದನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರು ಶಾಸಕರನ್ನು, ಯುವಕರನ್ನು ಸಮಾಧಾನಪಡಿಸಿ, ನಮಗೆ ಗ್ರಾಮದ ಅಭಿವೃದ್ಧಿ ವಿಚಾರವೇ ಮುಖ್ಯ. ಈ ರೀತಿ ವಾಕ್ಸಮರ ನಡೆಸುವುದು ಸರಿಯಲ್ಲ, ಎಂದು ಸಮಾಧಾನಪಡಿಸಿ ಶಾಸಕರನ್ನು ಕರೆದೊಯ್ದರು.