ಮಂಡ್ಯ ತಹಶೀಲ್ದಾರ್ ಕುಂಞ ಅಹಮದ್ ಪರವಾಗಿ ಹಣ ಪಡೆದು ಪ್ರತಿಭಟನೆ ಮಾಡಿದ್ದೇವೆಂದು ಆರ್.ಟಿ.ಐ ಕಾರ್ಯಕರ್ತರ ರವೀಂದ್ರ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾಗಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರೆಲ್ಲ ಸ್ವಯಂ ಪ್ರೇರಿತರಾಗಿ ಬಂದಿದ್ದರು ಎಂದು ಮುಖಂಡ ಸಂಗಾಪುರ ಸಣ್ಣೇಗೌಡ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂಞ ಅಹಮದ್ ಅವರಿಗೆ ಕೆಲವರು ಹಿಂಸೆ ನೀಡುತ್ತಿದ್ದು, ಅದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ. ರವೀಂದ್ರ ಅವರು ಪ್ರಾಮಾಣಿಕವಾಗಿದ್ದರೆ ವ್ಯವಹಾರಗಳಿಂದ ಹಣ ಪಡೆದಿಲ್ಲವೆಂದು ಸತ್ಯ ಮಾಡಲಿ, ಅದನ್ನು ಬಿಟ್ಟು ಧರ್ಮ ಗ್ರಂಥಗಳನ್ನು ಮುಟ್ಟುವುದು ಬೇಡ ಎಂದರು.
ಬಿಜೆಪಿ ಮುಖಂಡ ಎಂ.ಸಿ.ವರದರಾಜು ಮಾತನಾಡಿ, ತಹಶೀಲ್ದಾರ್ ಅವರು ಜನಪರ ಕೆಲಸ ಮಾಡುತ್ತಿದ್ದಾರೆ, ಅವರ ವಿರುದ್ದ ಕೆಲವರು ಆರೋಪ ಮಾಡುತ್ತಿರುವುದರ ಹಿಂದೆ ಷಡ್ಯಂತ್ರ ಅಡಗಿದೆ ಎಂದರು.
ಗೋಷ್ಠಿಯಲ್ಲಿ ಜೋಗಿಗೌಡ ಉಪಸ್ಥಿತರಿದ್ದರು.