ಗ್ರಾಮದ ಅಭಿವೃದ್ದಿಗೆ ನನ್ನ ಸಹಕಾರ ಇದ್ದೆ ಇರುತ್ತೆ, ನೇರವಾಗಿ ನನ್ನನ್ನು ಭೇಟಿ ಮಾಡಿ ಅಥವಾ ನಾನು ನಿಮಗೆ ಸಿಕ್ಕಿಲ್ಲವೆಂದರೆ ನನ್ನ ಪುತ್ರನನ್ನು ಭೇಟಿ ಮಾಡಿ, ನಿಮ್ಮ ಕೆಲಸಗಳನ್ನು ಮಾಡಿಕೊಡುತ್ತೇವೆ. ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಡುತ್ತೇವೆಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ತಿಳಿಸಿದರು.
ಮದ್ದೂರು ತಾಲ್ಲೂಕಿನ ಭಾರತೀನಗರ ಸಮೀಪದ ಅಣ್ಣೂರು ಗ್ರಾಮದ ಚೌಡಮ್ಮ ದೇವಸ್ಥಾನದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಅಣ್ಣೂರು ಗ್ರಾಮದ ಮದ್ದೂರಮ್ಮ ದೇವಸ್ಥಾನಕ್ಕೆ ಭಕ್ತಾಧಿಗಳು 2 ಲಕ್ಷ ಅನುದಾನ ನೀಡಬೇಕೆಂದು ಮನವಿ ಮಾಡಿದರು.
ಅಣ್ಣೂರು ಗ್ರಾಮ ನನ್ನ ಗ್ರಾಮವಿದ್ದಂತೆ. ನೀವು ಯಾರ ಮುಖಾಂತರವು ನನ್ನನ್ನು ಭೇಟಿಮಾಡುವ ಅವಶ್ಯಕತೆ ಇಲ್ಲ, ನಿಮಗೆ ಅಗತ್ಯ ಸಹಾಯ ಮಾಡುತ್ತೇನೆ. ದೇವಸ್ಥಾನದ ಅಭಿವೃದ್ದಿಗೆ ₹ 2 ಲಕ್ಷ ಮನವಿ ಇಟ್ಟಿದ್ದೀರಿ, 2 ಲಕ್ಷದ ಬದಲು 3 ಲಕ್ಷ ನೀಡುತ್ತೇನೆ, ದೇವಸ್ಥಾನವನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಿಕೊಳ್ಳಿ ಎಂದರು.
ಈ ಸಂರ್ಭದಲ್ಲಿ ಮನ್ಮುಲ್ ನಿರ್ದೇಶಕ ಎ.ಸಿ.ಸತೀಶ್, ನಿವೃತ್ತ ಇಂಜಿನೀಯರ್ ಬಸವರಾಜೇಗೌಡ, ಆರ್.ಸಿದ್ದಪ್ಪ, ಚಾಟಿ ಸಿದ್ದೇಗೌಡ, ರವಿ, ಗ್ರಾ.ಪಂ ಮಾಜಿ ಸದಸ್ಯ ರಾಜಣ್ಣ, ವಿಎಸ್ಎಸ್.ಬಿ.ಎನ್ ನಿರ್ದೇಶಕ ರಾಮು, ಚಿನ್ನಸ್ವಾಮಿ, ಸಿದ್ದರಾಜು, ಸಚ್ಚಿನ್, ರವಿಕುಮಾರ್, ನಿರಂಜನ್ ಸೇರಿದಂತೆ ಇತರರಿದ್ದರು.