Monday, October 2, 2023

ಪ್ರಾಯೋಗಿಕ ಆವೃತ್ತಿ

ಮೈ.ವಿ. ರವಿಶಂಕರ್ ಪರ ಕಿಯೋನಿಕ್ಸ್ ನಿರ್ದೇಶಕ ಮತಯಾಚನೆ

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಅವರ ಪರವಾಗಿ ಪಾಂಡವಪುರದಲ್ಲಿ ಬಿಜೆಪಿ ಮುಖಂಡ ಹಾಗೂ ಕಿಯೋನಿಕ್ಸ್ ನಿರ್ದೇಶಕ ಹಿರೇಮರಳಿ ಹೆಚ್.ಎನ್.ಮಂಜುನಾಥ್ ನೇತೃತ್ವದಲ್ಲಿ ಮತಯಾಚನೆ ಮಾಡಲಾಯಿತು.

ಇಂದು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮಂಜುನಾಥ್ ಅವರ ಜೊತೆಗೂಡಿ ಪದವೀಧರ ಮತದಾರರಿಗೆ ಕರಪತ್ರ ವಿತರಿಸಿ, ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಅವರಿಗೆ ಮೊದಲ ಪ್ರಾಶಸ್ತ್ಯ ಮತ ನೀಡುವ ಮೂಲಕ ಆಯ್ಕೆ ಮಾಡಿಕೊಡಬೇಕೆಂದು ಮನವಿ ಮಾಡಿದರು. ರವಿಶಂಕರ್ ಅವರ ಗೆಲುವು ಬಿಜೆಪಿ ಪಕ್ಷಕ್ಕೆ ಈ ಭಾಗದಲ್ಲಿ ಮತ್ತಷ್ಟು ಶಕ್ತಿ ತುಂಬಲಿದ್ದು,ಪದವೀಧರ ಮತದಾರರು ಸಜ್ಜನ ಅಭ್ಯರ್ಥಿ ಮೈ.ವಿ.ರವಿಶಂಕರ್ ಅವರಿಗೆ ಮತ ನೀಡಿ ಆಶೀರ್ವಾದ ಮಾಡಬೇಕೆಂದು ಎಂದು ಕೋರಿದರು.

ಈ ಸಂದರ್ಭದಲ್ಲಿ ಬಿಜೆಪಿ ಟೌನ್ ಅಧ್ಯಕ್ಷ ಶ್ರೀನಿವಾಸ್ ನಾಯ್ಕ, ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕ ಭಾಸ್ಕರ್, ಬಿಜೆಪಿ ಮಾಜಿ ಅಧ್ಯಕ್ಷ ಸೋಮಾಚಾರಿ, ಚಿಕ್ಕಾಡೆ ಮನು, ಶಿವಕುಮಾರ್, ಬಳೇಅತ್ತಿಗುಪ್ಪೆ ಕೈಲಾಸ್, ಹಿರೇಮರಳಿ ಪುಟ್ಟರಾಜು ಸೇರಿದಂತೆ ಅನೇಕರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!