ನಿನ್ನೆ ಸಂಜೆಯಿಂದ ಸುರಿದ ಭಾರಿ ಪ್ರಮಾಣದ ಮಳೆಗೆ ಮಂಡ್ಯ ನಗರದ ಶಂಕರಪುರದ ಮೇಲುಕೋಟೆ ರಸ್ತೆಯಲ್ಲಿರುವ ಚಿಕ್ಕೊಳಿ ಕಾಲುವೆಯ ನೀರು ಎನ್ ಎಫ್ ಇಂಡಸ್ಟ್ರೀಸ್ ಗೆ ನುಗ್ಗಿದ ಪರಿಣಾಮ ಲಕ್ಷಾಂತರ ಮೌಲ್ಯದ ಖಾರದ ಪುಡಿ ನಾಶವಾದ ಘಟನೆ ನಡೆದಿದೆ.
ಹಾಬಿದಾಭಾನು ಎಂಬುವರಿಗೆ ಸೇರಿದ ಎನ ಎಫ್ ಫ್ಯಾಕ್ಟರಿಯಲ್ಲಿ ವಿವಿಧ ಬಗೆಯ ಖಾರದ ಪುಡಿ ಮಾಡಲಾಗುತ್ತದೆ.
ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಕಾರ್ಖಾನೆಗೆ ನೀರು ನುಗ್ಗಿ ಅಲ್ಲಿದ್ದ ಮೂರು ಟನ್ನಿನಷ್ಟು ಕಾರದ ಪುಡಿ,ಮೆಣಸಿನಕಾಯಿ,ಧನಿಯಾ, ಬೇಳೆ,ಹೆಸರು ಬೇಳೆ,ಜೀರ್ಗೆ,ಮೆಣಸು, ಖಾರದ ಪುಡಿ ವಸ್ತುಗಳು ಮತ್ತು ಮೂಟೆಗಳು ನೆನೆಸಿಹಾಕಿದೆ.
ನೀರಿನೊಂದಿಗೆ ಹುಳ,ಹುಪ್ಪಟೆಗಳು ಕಾರದಪುಡಿಯೊಂದಿಗೆ ಬೆರೆತು ಲಕ್ಷಾಂತರ ಮೌಲ್ಯದ ನಷ್ಷಕ್ಕೆ ಕಾರಣವಾಗಿದೆ.