ಬೆಂಗಳೂರಿನಲ್ಲಿ ಜರುಗುವ ನಾಡಪ್ರಭು ಕೆಂಪೇಗೌಡ ಸ್ಮಾರಕ ಉದ್ಘಾಟನೆ ಸಮಾರಂಭದ ಅಂಗವಾಗಿ ಹೊರಡಿಸಿದ್ದ ಕೆಂಪೇಗೌಡರ ರಥ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಿ ಇಂದು ಶ್ರೀರಂಗಪಟ್ಟಣ ತಾಲ್ಲೂಕಿನ ಕೊಡಿಯಾಲ ಗ್ರಾಮ ಪಂಚಾಯಿತಿಗೆ ಬೆಳಿಗ್ಗೆ ಆಗಮಿಸಿತು. ಕೆಂಪೇಗೌಡ ರಥವನ್ನು ಕೊಡಿಯಾಲ ಗ್ರಾಮ ಪಂಚಾಯಿತಿ ಮತ್ತು ಶಾರದಾ ಸ್ಕೂಲ್ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಕೊಡಿಯಾಲದ ಡೈರಿ ಬಳಿ ರಥವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್, ದಿನೇಶ್ ಮತ್ತು ಶಾರದಾ ಶಾಲೆಯ
ಮುಖ್ಯಶಿಕ್ಷಕ ಜೆ.ಕೇಶವಮೂರ್ತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ ಶ್ರೀರಂಗಪಟ್ಟಣ ತಾಲ್ಲೂಕು ಅಧ್ಯಕ್ಷ ಬಿ.ಮಂಜುನಾಥ್
ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಹೇಮಂತ್ಕುಮಾರ್ ಪುಷ್ಪಾರ್ಚನೆ ಮಾಡಿ ಬರಮಾಡಿಕೊಂಡರು.
ನಂತರ ಪೂರ್ಣಕುಂಭ ಹೊತ್ತ ಶಾರದಾ ಶಾಲೆಯ ವಿದ್ಯಾರ್ಥಿನಿಯರು ಮತ್ತು ಸ್ತ್ರೀ ಶಕ್ತಿ ಸಂಘದ ಮಹಿಳೆಯರು, ಶಾರದಾ ಶಾಲೆಯ ಕಂಸಾಳೆ ತಂಡದವರು ಮತ್ತು ಕೆಂಪೇಗೌಡರ ವೇಷಧಾರಿಯಾಗಿದ್ದ ಶಾರದಾ ಶಾಲೆಯ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಹೊರಟ ರಥವನ್ನು ಗ್ರಾಮ ಪಂಚಾಯಿತಿ ಮುಂಭಾಗ ಕೆಂಪೇಗೌಡರ
ಭಾವಚಿತ್ರಕ್ಕೆ ಪಂಚಾಯಿತಿಯ ಪಿಡಿಒ ನಿಶ್ಚಿತ ಗೌರವ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಡಾ. ಪ್ರಭಾ, ಗ್ರಾಮ ಪಂಚಾಯಿತಿ ಲೆಕ್ಕಪರಿಶೋಧಕ ಮಂಜುನಾಥ್, ಎಸ್.ವರದರಾಜು ಗ್ರಾಮಸ್ಥರು, ಪಂಚಾಯಿತಿ ನೌಕರರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.