”ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನರಸತ್ತವರು, ಅವರಿಗೆ ಸಕ್ಕರೆ ಕಾರ್ಖಾನೆ ಮಾಲೀಕರನ್ನು ಕರೆದು ಮಾತನಾಡಿ, ಕಬ್ಬಿಗೆ ಬೆಲೆ ನಿಗದಿ ಮಾಡುವ ತಾಕತ್ತಿಲ್ಲ” ಎಂದು ಕರ್ನಾಟಕ ರಾಜ್ಯ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ವಾಗ್ದಾಳಿ ನಡೆಸಿದರು.
ಕರ್ನಾಟಕ ರಾಜ್ಯ ರೈತಸಂಘದ ನೇತೃತ್ವದಲ್ಲಿ ಇಂದು ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಅವರು ಮಾತನಾಡಿದರು.
”ಜಿಲ್ಲಾಡಳಿತ ನಿದ್ರೆ ಮಾಡ್ತಿದೆ, ಸರ್ಕಾರ ಸತ್ತೋಗಿದೆ” ಅದಕ್ಕೆ ಎಚ್ಚರಿಸಲು ನಾವು ಬಂದಿದ್ದೇವೆ, ಈಗಾಗಲೇ ಬೆಳಗಾವಿ ಹಾಗೂ ಹಳಿಯಾಳದಲ್ಲಿ ಒಂದು ತಿಂಗಳಿಂದ ರೈತ ಹೋರಾಟ ನಡೆಸುತ್ತಿದೆ, ಆದರೆ ಸರ್ಕಾರವೇ ಸತ್ತೊಗಿದೆ, ಇದು ಮುಂದುವರೆದರೆ ಬೆಳಗಾವಿ ವಿಧಾನಸಭೆ ಅಧಿವೇಶನಕ್ಕೆ 50 ಸಾವಿರ ರೈತರೊಂದಿಗೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.