Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯದ ನೆಲದಲ್ಲಿ ಕೋಮುದ್ವೇಷ ಸೃಷ್ಠಿ ಖಂಡನೀಯ: ನರೇಂದ್ರಸ್ವಾಮಿ

ದೇಶ ಮುಖ್ಯನೋ, ರಾಜಕೀಯ ಮುಖ್ಯನೋ ಎನ್ನುವುದನ್ನು ಮಂಡ್ಯದ ಜನರು ತೀರ್ಮಾನ ಮಾಡುತ್ತಾರೆ. ಅಮಾಯಕರನ್ನು ಪ್ರಚೋದನೆ ಮಾಡುವುದು ಸರಿಯಲ್ಲ ಎಂದು ಶಾಸಕ ಪಿಎಂ ನರೇಂದ್ರಸ್ವಾಮಿ ಕಿಡಿಕಾರಿದರು.

ಮಳವಳ್ಳಿಯ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಂಡ್ಯದ ಜನರು ಬುದ್ದಿವಂತರು ಜೊತೆಗೆ ಶಾಂತಿ ಪ್ರಿಯರು, ಮಂಡ್ಯ ನೆಲದ ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರಿಗೂ ಬಗ್ಗವರಲ್ಲ, ಇಲ್ಲಿನ ಜನರಿಗೆ ಸತ್ಯ ಏನು ಎಂದು ಅರ್ಥ ಮಾಡಿಕೊಳ್ಳುವ ಶಕ್ತಿಯಿದೆ. ಯಾವುದಕ್ಕೂ ಬಗ್ಗುವುದಿಲ್ಲ, ಯಾರಿಗೂ ಬಗ್ಗವರಲ್ಲ ಎಂದ ಅವರು, ಮಾಧ್ಯಮಗಳು ವಿವಾದವನ್ನು ಪ್ರಚೋದಿಸದೇ ಸತ್ಯ ಎನ್ನುವುದನ್ನು ಪ್ರಚಾರ ಮಾಡಬೇಕೆಂದು ಕೋರಿದರು.

ಮಂಡ್ಯದ ನೆಲದಲ್ಲಿ ಕೋಮು ದ್ವೇಷ ಹುಟ್ಟಿಸಿರುವುದು ಖಂಡನೀಯ, ಕೆರಗೋಡು ಧ್ವಜ ವಿವಾದದ ಸ್ಥಳ ಯಾವುದು, ಯಾವ ಉದ್ದೇಶಕ್ಕಾಗಿ ಅನುಮತಿ ಪಡೆದಿದ್ದಾರೆ, ಜ.26ರಂದು ಏನು ನಡೆಯಿತು, ಎಂಬುವುದರ ಬೆಳವಣಿಗೆ ಬಗ್ಗೆ ಜನರಿಗೆ ಸಂಪೂರ್ಣ ಅರ್ಥವಾಗುತ್ತದೆ, ಎಲ್ಲಿ ತನಕ ಯಾರು ಏನು ಮಾಡುತ್ತಾರೋ ಮಾಡಲಿ ಕಾಲ ಮತ್ತು ಜನರೇ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!