Thursday, September 19, 2024

ಪ್ರಾಯೋಗಿಕ ಆವೃತ್ತಿ

ರಾಷ್ಟ್ರಧ್ವಜ ಹಾರಿಸಲು ಜಾಗೃತಿ ಜಾಥ

ಹರ್ ಘರ್ ತಿರಂಗ ಘೋಷ ವಾಕ್ಯದೊಂದಿಗೆ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು ಬೈಕ್ ರ‍್ಯಾಲಿ ಮೂಲಕ ಮನೆ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸುವ ಜಾಗೃತಿ ಅಭಿಯಾನ ನಡೆಸಿದರು.

ಮಂಡ್ಯ ನಗರದ ಜೆ.ಸಿ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ, ಓಬಿಸಿ ಮೋರ್ಚಾ, ನಗರ ಮೋರ್ಚಾ ನೇತೃತ್ವದಲ್ಲಿ ದ್ವಿಚಕ್ರವಾಹನ ಮತ್ತು ರಾಷ್ಟ್ರಧ್ವಜ ಹಿಡಿದ ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡು ಪ್ರಧಾನಮಂತ್ರಿ ಮೋದಿ ಮತ್ತು ಭಾರತ ದೇಶದ ಬಗ್ಗೆ ಘೋಷಣೆಗಳನ್ನು ಕೂಗಿದರು.

ನಗರ ವ್ಯಾಪ್ತಿಯ ಆರ್.ಪಿ. ರಸ್ತೆ, 100 ಅಡಿ ರಸ್ತೆ, ಗುತ್ತಲು ರಸ್ತೆ, ಕಾಳಿಕಾಂಬ ದೇವಾಲದಲ್ಲಿ ಪೂಜೆ, ಪೇಟೆಬೀದಿ ರಸ್ತೆಗಳಲ್ಲಿ ಸಂಚರಿಸಿ ರಾಷ್ಟ್ರಪ್ರೇಮ ಜಾಗೃತಿ ಅಭಿಯಾನ ನಡೆಸಿದರು.

ರಸ್ತೆಯುದ್ಧಕ್ಕೂ ದೇಶಭಕ್ತಿಯ ಘೋಷಣೆಗಳನ್ನು ಮೊಳಗಿಸಿ ಜೆಸಿ ವೃತ್ತದಲ್ಲಿ ಸಮಾಪ್ತಿಗೊಳಿಸಿದರು.
ಬಳಿಕ ಮಾತನಾಡಿದ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಎಂ.ಬಿ.ರಮೇಶ್‌ ವಿಶ್ವಕರ್ಮ ಅವರು, ದೇಶಾದ್ಯಂತ ಇಂದಿನಿಂದ ಮೂರು ದಿನಗಳ ಕಾಲ ಸರ್ಕಾರಿ ಕಚೇರಿ, ಸಂಘ ಸಂಸ್ಥೆಗಳ ಕಟ್ಟಡಗಳು, ಧಾರ್ಮಿಕ ಕೇಂದ್ರಗಳು ನಾಗರಿಕರ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಭಾಗಿಯಾಗುವುದು ನಮ್ಮ ಸೌಭಾಗ್ಯವಾಗಿದೆ ಎಂದರು.

ಇಂದು ಬಿಜೆಪಿ ಕಾರ್ಯ ಕರ್ತರು ಮತ್ತು ರಾಷ್ಟ್ರಪ್ರೇಮಿಗಳು ರಾಷ್ಟ್ರಧ್ವಜ ಹಿಡಿದು ಜಾಗೃತಿ ಅಭಿಯಾನ ನಡೆಸಿ ಸಂಭ್ರಮಿಸಿದರು.

ಜಿಲ್ಲಾ ಬಿಜೆಪಿ ಯುವ ಮೋ ರ್ಚಾ ಪ್ರಧಾನ ಕಾರ್ಯದರ್ಶಿ ಸಂದೇಶ್, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕರೆ ಮೇರೆಗೆ ಭಾರತ ದೇಶದ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ತ್ರಿವರ್ಣ ಧ್ವಜ ಮನೆ ಮನೆ ಮೇಲೆ ಹಾರಾಟ ಮಾಡು ತ್ತಿದೆ, ರಾಷ್ಟ್ರಪ್ರೇಮ ಸ್ವಾತಂತ್ರ್ಯ ಭಾರತದ ಹಬ್ಬವನ್ನು ವಿಜೃಂಭ ಣೆಯಿಂದ ಆಚರಿಸಲಾ ಗುತ್ತಿದೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!