Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಹನಕೆರೆಯಲ್ಲಿ ಪೌತಿ ಖಾತಾ ಆಂದೋಲನ

ಮಂಡ್ಯತಾಲ್ಲೂಕಿನ ಹನಕೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಕಂದಾಯ ಇಲಾಖೆ ವತಿಯಿಂದ ಪೌತಿ ಖಾತೆ ಆಂದೋಲನಕ್ಕೆ ತಹಶೀಲ್ದಾರ್ ಡಾ‌‌‌‌.ಶಿವಕುಮಾರ ಬಿರಾದರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಕುಟುಂಬದ ಮುಖ್ಯಸ್ಥರು, ಸದಸ್ಯರು ಮರಣ ಹೊಂದಿದ ಬಳಿಕ ಆರ್’ಟಿಸಿ ಬದಲಾವಣೆಯಾಗದೆ ಸರ್ಕಾರದ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅದನ್ನು ಸರಿಪಡಿಸಲು ವಾರಕ್ಕೊಂದು ದಿನ ಗ್ರಾಪಂಗಳಿಗೆ ತೆರಳಿ ಪೌತಿಖಾತಾ ಆಂದೋಲನ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಇದೇ ವೇಳೆ ಪೌತಿಖಾತೆ ಸೇರಿದಂತೆ 50 ಅರ್ಜಿಗಳನ್ನು ಸ್ವೀಕರಿಸಲಾಯಿತು. ಸಾಮಾಜಿಕ ಭದ್ರತಾ ಯೋಜ‌ನೆಯ‌ ಫಲಾನುಭವಿಗಳಿಗೆ ಪತ್ರ ನೀಡಲಾಯಿತು.

ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷ ಮನೋಜ್’ಕುಮಾರ್, ಉಪಾಧ್ಯಕ್ಷೆ ಜಯಮ್ಮ, ಸದಸ್ಯರಾದ ಮೋಹನ್, ಮಂಜೇಶ್, ರಾಮಕೃಷ್ಣ, ರವಿ, ಜಯರಾಂ, ನಾಡಕಚೇರಿ ಉಪ ತಹಶೀಲ್ದಾರ್ ರೋಹಿತ್ ಕುಮಾರ್ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!