ಮಂಡ್ಯ ನಗರದ ವಿವಿ ರಸ್ತೆಯ ಹಲವು ಅಂಗಡಿಗಳ ಮೇಲೆ ಮಂಡ್ಯ ನಗರಸಭೆ ಆಯುಕ್ತ ಮಂಜುನಾಥ್ ಅವರ ಆದೇಶದಂತೆ ಆರೋಗ್ಯ ನಿರೀಕ್ಷಕರು ದಾಳಿ ನಡೆಸಿ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡರು.
ವಿವಿಧ ಅಂಗಡಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡು ದಂಡವನ್ನು ವಿಧಿಸಲಾಯಿತು.
ಈ ಅಭಿಯಾನದಲ್ಲಿ ಭಾಗವಹಿಸಿದ ಪ್ಲಾಸ್ಟಿಕ್ ವಿರೋಧಿ, ಪರಿಸರ ಮಿತ್ರ ಜಯಶಂಕರ್ ಅವರು ಗ್ರಾಹಕರಿಗೆ ಪ್ಲಾಸ್ಟಿಕ್ ಕಪ್ಪು ಕ್ಯಾರಿ ಬ್ಯಾಗ್ ಗಳ ನಿಷೇಧ ಮಾಡಲು ತಿಳಿಸಿ, ಎಲ್ಲರೂ ತಪ್ಪದೇ ಮನೆಯಿಂದ ಬರುವಾಗ ಬಟ್ಟೆ ಬ್ಯಾಗ್ ಗಳನ್ನು ತಂದು ಬಳಸಲು ಸಲಹೆ ಮಾಡಿದರು.