ಮದ್ದೂರು ತಾಲ್ಲೂಕಿನ ಭಾರತೀನಗರ ಸಮೀಪದ ಚಂದೂಪುರದಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಕೋಳಿ ಫಾರಂ ಹೌಸ್ ಸಂಪೂರ್ಣ ಜಲಾವೃತಗೊಂಡು,ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಚಂದೂಪುರದ ಹೊರವಲಯದಲ್ಲಿರುವ ಸ್ವಾಮಿ ಹಾಗೂ ಸಿದ್ದರಾಜು ಅವರ ಫಾರಂ ಹೌಸ್ ಗೆ ಇಗ್ಗಲೂರು ಶಿಂಷಾ ನದಿಯ ನೀರು ನುಗ್ಗಿ ದಿನಬಳಕೆಯ ವಸ್ತುಗಳು,ಜೀವನ ನಿರ್ವಹಣೆಗಾಗಿ ಸಾಕಿದ್ದ ಸುಮಾರು 200ನಾಟಿ ಕೋಳಿ ,10ತೆಂಗಿನಮರ 2ಹಸು ಸಂಪೂರ್ಣ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಮನೆಯೊಳಗೆ ನೀರು ತುಂಬಿದ ಪರಿಣಾಮ ಮನೆಯಲ್ಲಿದ್ದ ದಿನಸಿ ಪದಾರ್ಥಗಳು ಸಂಪೂರ್ಣ ನೀರಿನಲ್ಲಿ ಕೊಚ್ಚಿ ಹೋಗಿದೆ.ಇದರಿಂದಾಗಿ
ಸುಮಾರು 4ರಿಂದ 5ಲಕ್ಷ ರೂ.ನಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.
ವಿಷಯ ತಿಳಿದ ಗ್ರಾ.ಪಂ.ಅದ್ಯಕ್ಷ ಹಾಗಲಹಳ್ಳಿ ರಾಜು ಭೇಟಿ ನೀಡಿ ಇವರಿಗೆ ಜೀವನ ನಿರ್ವಹಣೆ ಮಾಡಲು ಇದ್ದ ಕುರಿ, ಕೋಳಿ, ಹಸು, ಮೇಕೆಗಳೆಲ್ಲ ನೀರು ಪಾಲಾಗಿದ್ದು ಈ ರೈತರಿಗೆ ಸರ್ಕಾರದಿಂದ ಹಾಗೂ ಶಾಸಕರ ಜೊತೆ ಮಾತಾನಾಡಿ ಸೂಕ್ತ ಪರಿಹಾರ ದೊರಕಿಸಲಾಗುವುದೆಂದು ಭರವಸೆ ನೀಡಿದರು.