ಮೋದಿಜೀ 400 ಸೀಟು ಗೆದ್ದರೂ ಸಹ ಮುಂದಿನ ಪ್ರಧಾನಿ ಆಗುವುದಿಲ್ಲ ಎನ್ನುತ್ತಿವೆ ನಾಗಪುರದ ಆರ್ ಎಸ್ ಎಸ್ ಮೂಲಗಳು. ಪ್ರಧಾನಿ ಮೋದಿಜೀ ಅವರ ಕೆಲಸ ಶೈಲಿಯನ್ನು ಪ್ರಶ್ನಿಸಿ ಆರ್ ಎಸ್ ಎಸ್ ಪ್ರಮುಖರು ಹತ್ತು ಹಲವು ಪ್ರಶ್ನೆಗಳನ್ನು ಮೋದಿಜೀ ಅವರಿಗೆ ಕೇಳಿದ್ದು, ಅದರಲ್ಲಿ ಸೂರತ್ ನಲ್ಲಿ ಎದುರಾಳಿ ಇಲ್ಲದ ರೀತಿ ಮಾಡಿದ್ದರಿಂದ ಹಿಡಿದು ಪ್ರಜ್ವಲ್ ಜೊತೆಗಿನ ಪೋಟೋ ಸೆಷನ್ ತರದವರೆಗಿನ ಹಲವು ವಿಷಯಗಳು ಸೇರಿವೆ.
ಆರ್ ಎಸ್ ಎಸ್ ಪ್ರಮುಖರು ಹೆಚ್.ಡಿ.ದೇವೇಗೌಡ ಕುಟುಂಬದ ಜೊತೆಗಿನ ಪೋಟೋ ಒಂದನ್ನು ಮೋದಿಜೀಗೆ ತೋರಿಸಿದ್ದಾರೆ. ರಾಜಕಾರಣಿಗಳು ಪರಸ್ಪರ ಎದುರು ಬದುರು ಬಂದಾಗ ಪೋಟೋ ತೆಗೆಸಿಕೊಳ್ಳುವುದು ಸರ್ವೇ ಸಾಮಾನ್ಯ. ಆದರೆ ಆ ರೀತಿಯ ಕಾಮನ್ ಪೋಟೋವನ್ನು ತೆಗೆಸಿಕೊಳ್ಳದೆ ದೇವೇಗೌಡರನ್ನು ಮಧ್ಯದಲ್ಲಿ ಕೂರಿಸಿಕೊಂಡು ಅವರ ಇಡೀ ಕುಟುಂಬದ ಜೊತೆ ತೆಗೆಸಿಕೊಂಡಿರುವ ಗ್ರೂಪ್ ಪೋಟೋದಲ್ಲಿ ಲೈಂಗಿಕ ದೌರ್ಜನ್ಯಗಳ ಆರೋಪಿ ಆಗಿರುವ ಪ್ರಜ್ವಲ್ ರೇವಣ್ಣ ಕೂಡ ಇರುವ ಬಗ್ಗೆ ಆರ್ ಎಸ್ ಎಸ್ ಪ್ರಮುಖರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಜ್ವಲ್ ರೇವಣ್ಣನ ಲೈಂಗಿಕ ದೌರ್ಜನ್ಯದ ಬಗ್ಗೆ ಹಾಸನದ ಬಿಜೆಪಿ ಮುಖಂಡ ರಾಜ್ಯ ಹಾಗೂ ರಾಷ್ಟ್ರ ಬಿಜೆಪಿ ನಾಯಕರ ಗಮನಕ್ಕೆ ತಂದ ನಂತರವೂ ಆತನಿಗೆ ಟಿಕೆಟ್ ನೀಡಿದ್ದು, ಆತನ ಜೊತೆ ತೆಗೆಸಿಕೊಂಡ ಪೋಟೋವನ್ನು ಆರ್ ಎಸ್ ಎಸ್ ಒಪ್ಪಲು ಸಾಧ್ಯವಿಲ್ಲವೆಂದು ತಿಳಿಸಿದ್ದು, ನಾಲ್ಕು ನೂರು ಸೀಟು ಗೆದ್ದರೂ ಸಹ ನೀವೂ ಮುಂದಿನ ಪ್ರಧಾನಿ ಆಗಬಾರದು ಎಂಬ ಮೇಸೆಜ್ ಕಳಿಸಿದೆ. ಇದಕ್ಕೆ ವಿರುದ್ಧವಾಗಿ ಮೋದಿಜೀ ಬಿಜೆಪಿ ಅಧ್ಯಕ್ಷ ನಡ್ಡಾ ಅವರ ಕೈಯಲ್ಲಿ ಈಗ ಬಿಜೆಪಿ ಬೆಳೆದಿದೆ. ಬಿಜೆಪಿಗೆ ಆರ್ ಎಸ್ ಎಸ್ ಸಂಘಟನೆಯ ಸಹಾಯ ಬೇಕಿಲ್ಲ, ತನ್ನ ವ್ಯವಹಾರಗಳನ್ನು ತಾನು ನಿಭಾಯಿಸುವಷ್ಟು ಶಕ್ತವಾಗಿದೆ ಎಂದು ಹೇಳಿಕೆ ಕೊಡಿಸಿದ್ದಾರೆ ಎಂದು ಮಾಧ್ಯಮಗಳು ಹೇಳುತ್ತಿವೆ.