ಮಳವಳ್ಳಿ ಪಟ್ಟಣದ ಹೊರವಲಯದ ಮಾರೇಹಳ್ಳಿ ಬಳಿಯ ಸರ್ಕಾರಿ ಆದರ್ಶ ವಿದ್ಯಾಲಯ(ಆರ್ಎಂಎಸ್ಎ)ದ ಎಸ್ಡಿಎಂಸಿ ಅಧ್ಯಕ್ಷರಾಗಿ ಟಿ.ಎಂ.ಪ್ರಕಾಶ್ ಆಯ್ಕೆಯಾದರು.
ಇಂದು ನಡೆದ ಎಸ್ಡಿಎಂಸಿ ಸಭೆಯಲ್ಲಿ ಅಧ್ಯಕ್ಷರಾಗಿ ಟಿ.ಎಂ.ಪ್ರಕಾಶ್, ಉಪಾಧ್ಯಕ್ಷರಾಗಿ ಕವಿತಾ, ಸದಸ್ಯರಾಗಿ ರಾಜೀವ್, ಕೆ.ಸಿ.ನಾಗೇಗೌಡ, ಎಂ.ಲಿಂಗರಾಜು, ರಾಜೇಶ್ವರಿ, ಜ್ಯೋತಿ, ಶಶಿಕಲಾ, ಕೆ.ಕುಮಾರ್, ಮಹದೇವಸ್ವಾಮಿ, ಲತಾ, ಸುಮಾ, ರೇಖಾ, ಅಲ್ಮಾಜ್ ಭಾನು, ಶಿವಮೂರ್ತಿ, ಮಂಜುರಾಜೇಅರಸು, ಪುರುಷೋತ್ತಮ್ ಹಾಗೂ ವಸಂತ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷ ಟಿ.ಎಂ.ಪ್ರಕಾಶ್ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ನಾವುಗಳು ಕೈಜೋಡಿಸಿ ಕೆಲಸ ಮಾಡಬೇಕಿದೆ. ಹಿಂದಿನ ಅಧ್ಯಕ್ಷ ಎಂ.ವಿ.ಕೃಷ್ಣ ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಲಿದ್ದೇವೆ. ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಶಿಕ್ಷಣ ಇಲಾಖೆ, ಚುನಾಯಿತ ಜನಪ್ರತಿನಿಧಿಗಳ ಹಗೂ ದಾನಿಗಳ ಸಹಕಾರ ಪಡೆದು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು. ಮುಖ್ಯಶಿಕ್ಷಕ ಶಿವರಾಜು ಹಾಗೂ ಶಿಕ್ಷಕರು ಇದ್ದರು.