Thursday, September 19, 2024

ಪ್ರಾಯೋಗಿಕ ಆವೃತ್ತಿ

ಏ.7ಕ್ಕೆ ಹಲವು ಸಾಧಕರಿಗೆ ವಿವಿಧ ಪ್ರಶಸ್ತಿಗಳ ಪ್ರದಾನ

ಎಂ.ಸಿದ್ದರಾಮು ವಿಜ್ಞಾನ ಶಿಕ್ಷಕ ಪ್ರಶಸ್ತಿ, ಸಿ.ನಾಗರಾಜು-ಗುಣಸಾಗರಿ ನಾಗರಾಜು ಜನಪದ ಕಲಾ ಪ್ರಶಸ್ತಿ, ಚೆನ್ನಮ್ಮ ಕರಿಯಪ್ಪ ಜನಪದ ಕಲಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏ.7ರಂದು ಸಂಜೆ 5.30ಗಂಟೆಗೆ ಮಂಡ್ಯನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆಯಲಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ ಗೌಡ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಲನಚಿತ್ರ ನಿರ್ದೇಶಕ ಎನ್.ಆರ್.ನಂಜುಂಡೇಗೌಡ ಅಧ್ಯಕ್ಷತೆ ವಹಿಸುವರು. ಸಮಾಜಸೇವಕ ಎಸ್.ಎ.ಪುಟ್ಟರಾಜು ಪ್ರಶಸ್ತಿ ಪ್ರದಾನ ಮಾಡುವರು. ಎಸ್.ಸುದೀಪ್ ಕುಮಾರ್, ಸಾಹಿತಿ ಗುಣಸಾಗರಿ ಸಿ.ನಾಗರಾಜು, ಪ್ರೊ.ನರಸಿಂಹೇಗೌಡ ನಾರಣಾಪುರ ಉಪಸ್ಥಿತರಿರುವರು ಎಂದರು.

ಸರೋಜಮ್ಮ, ಸವಿತಾ ಚೀರುಕುನ್ನಯ್ಯ,, ಕೆ.ಪಿ.ದೇವರಾಜು, ಕೆ.ಎಂ.ಬಸವರಾಜು

ಗಣಿತ ಶಿಕ್ಷಕ ಕೆ.ಎಂ.ಬಸವರಾಜು ಅವರಿಗೆ ಎಂ.ಸಿದ್ದರಾಮು ವಿಜ್ಞಾನ ಶಿಕ್ಷಕ ಪ್ರಶಸ್ತಿ, ಪೂಜಾ ಕುಣಿತ ಕಲಾವಿದ ಕೆ.ಪಿ.ದೇವರಾಜು ಹಾಗೂ ಪೂಜಾ ಕುಣಿತ ಕಲಾವಿದೆ ಸವಿತಾ ಚೀರುಕುನ್ನಯ್ಯ ಅವರಿಗೆ ಸಿ.ನಾಗರಾಜು -ಗುಣಸಾಗರಿ ಸಿ. ನಾಗರಾಜು ಜನಪದ ಕಲಾ ಪ್ರಶಸ್ತಿ ಪ್ರದಾನ ಹಾಗೂಜನಪದ ಕಲಾವಿದೆ ಸರೋಜಮ್ಮ ಅವರಿಗೆ ಚೆನ್ನಮ್ಮ ಕರಿಯಪ್ಪ ಜನಪದ ಕಲಾ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಮುಖಂಡರಾದ ನಾಗಪ್ಪ, ಚಂದಗಾಲು ಲೋಕೇಶ್ ಹಾಗೂ ಉದಯ್ ಶಂಕರ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!