ಶ್ರೀರಂಗಪಟ್ಟಣ ತಾಲ್ಲೂಕಿನ ಆನಂದೂರು ಗ್ರಾಮದ ಅಪ್ಪು ಅಭಿಮಾನಿ ಕಿರಣ್(22) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶನಿವಾರ ಗ್ರಾಮದಲ್ಲಿ ನಡೆದ ಅಪ್ಪು ಸ್ಮರಣೆಯಲ್ಲಿ ಭಾಗವಹಿಸಿ ಅನ್ನಸಂತರ್ಪಣೆ ಕೂಡ ನಡೆಸಿದ್ದರು. ಕಾರ್ಯಕ್ರಮದ ಬಳಿಕ ಮನೆಗೆ ತೆರಳಿದ ಕಿರಣ್ , ರಾತ್ರಿ 10 ಗಂಟೆಗೆ ಮನೆಯ ಕೊಠಡಿಯಲ್ಲಿಯೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಆತ್ಮಹತ್ಯೆ ಕುರಿತು ಕೆ.ಆರ್.ಎಸ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಅಪ್ಪಟ ಅಭಿಮಾನಿಯಾಗಿದ್ದ ಕಿರಣ್ ಆತ್ಮಹತ್ಯೆಗೆ ಯತ್ನಿಸಿದ್ದು ಗ್ರಾಮಸ್ಥರಿಗೆ ಆಗತಾ ಉಂಟು ಮಾಡಿದೆ. ಅನ್ನಸಂಪರ್ಪಣೆ ನಡೆಸಿದ ಬಳಿಕ ತನ್ನ ಸ್ನೇಹಿತರಿಗೆ ಗಂಧದಗುಡಿ ಸಿನಿಮಾದ ಟಿಕೆಟ್ ಅನ್ನು ಉಚಿತವಾಗಿ ವಿತರಿಸಿದ್ದ.