Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಲಾಪದಿಂದ ಹೊರದಬ್ಬುವಾಗ ಆರ್.ಅಶೋಕ್ ನಗು ; ಬಿಜೆಪಿಗರು ಮೋಜು ಮಾಡಲು ಬಂದಿರುವಂತಿದೆ ಎಂದ ಕಾಂಗ್ರೆಸ್

ಆಹಾ ಅದೇನು ನಗು, ಅದೇನು ಸಂತೋಷ, ಮಾರ್ಷಲ್ ಗಳು ಎತ್ತಿ ಎಸೆಯುವುದನ್ನು ಶಾಸಕ ಆರ್.ಅಶೋಕ್  ಅವರು ಪಲ್ಲಕ್ಕಿ ಮೆರವಣಿಗೆ ಎಂದುಕೊಂಡಿರುವಂತಿದೆ! ಬಿಜೆಪಿಗರು ವಿಧಾನಸೌಧದಲ್ಲಿ ಮೋಜು ಮಾಡಲು ಬಂದಿರುವಂತಿದೆ ಕಾಂಗ್ರೆಸ್ ಕಿಡಿಕಾರಿದೆ.

“>

ಜನರ ಪರ ಚರ್ಚೆ ಮಾಡಲು ಇಷ್ಟವಿಲ್ಲದ ಬಿಜೆಪಿ ಸದನದ ಅತ್ಯಮೂಲ್ಯ ಸಮಯವನ್ನು ಹಾಳು ಮಾಡುತ್ತಿದ್ದಾರೆ. ಇದು ಬಿಜೆಪಿಯ ನಾಚಿಕೆಗೇಡಿನ ವರ್ತನೆ ಎಂದು ಕೆಂಡಕಾರಿರುವ ಕಾಂಗ್ರೆಸ್, ಬಿಜೆಪಿಗೆ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರಲು ಅನರ್ಹವಾಗಿದೆ ಎಂದಿದೆ.

ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡದ ಬಿಜೆಪಿ ಸಾಂವಿಧಾನಿಕ ವ್ಯವಸ್ಥೆಯನ್ನು ಅಪಹಾಸ್ಯ ಮಾಡುತ್ತಿದೆ. ಈಗ ಸ್ಪೀಕರ್ ಮುಖದ ಮೇಲೆ ಪೇಪರ್ ಎಸೆದು ಸದನದ ಸಭಾಧ್ಯಕ್ಷರ ಘನತೆಗೆ ಚ್ಯುತಿ ತಂದಿದ್ದಾರೆ. ಸದನದೊಳಗೆ ಗೂಂಡಾಗಿರಿ ನಡೆಸುವ ಬಿಜೆಪಿ ರೌಡಿ ಮೋರ್ಚಾದ ಸಂಸ್ಕೃತಿಯನ್ನು ಅನಾವರಣಗೊಳಿಸಿದೆ ಅಕ್ರೋಶ ವ್ಯಕ್ತಪಡಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!