ಆಹಾ ಅದೇನು ನಗು, ಅದೇನು ಸಂತೋಷ, ಮಾರ್ಷಲ್ ಗಳು ಎತ್ತಿ ಎಸೆಯುವುದನ್ನು ಶಾಸಕ ಆರ್.ಅಶೋಕ್ ಅವರು ಪಲ್ಲಕ್ಕಿ ಮೆರವಣಿಗೆ ಎಂದುಕೊಂಡಿರುವಂತಿದೆ! ಬಿಜೆಪಿಗರು ವಿಧಾನಸೌಧದಲ್ಲಿ ಮೋಜು ಮಾಡಲು ಬಂದಿರುವಂತಿದೆ ಕಾಂಗ್ರೆಸ್ ಕಿಡಿಕಾರಿದೆ.
ಆಹಾ ಅದೇನು ನಗು, ಅದೇನು ಸಂತೋಷ, ಮಾರ್ಷಲ್ ಗಳು ಎತ್ತಿ ಎಸೆಯುವುದನ್ನು @RAshokaBJP ಅವರು ಪಲ್ಲಕ್ಕಿ ಮೆರವಣಿಗೆ ಎಂದುಕೊಂಡಿರುವಂತಿದೆ!
ಬಿಜೆಪಿಗರು ವಿಧಾನಸೌಧದಲ್ಲಿ ಮೋಜು ಮಾಡಲು ಬಂದಿರುವಂತಿದೆ.
ಜನರ ಪರ ಚರ್ಚೆ ಮಾಡಲು ಇಷ್ಟವಿಲ್ಲದ ಬಿಜೆಪಿ ಸದನದ ಅತ್ಯಮೂಲ್ಯ ಸಮಯವನ್ನು ಹಾಳು ಮಾಡುತ್ತಿದ್ದಾರೆ.
ಇದು ಬಿಜೆಪಿಯ ನಾಚಿಕೆಗೇಡಿನ ವರ್ತನೆ. pic.twitter.com/KYKELdzsyR
— Karnataka Congress (@INCKarnataka) July 19, 2023
“>
ಜನರ ಪರ ಚರ್ಚೆ ಮಾಡಲು ಇಷ್ಟವಿಲ್ಲದ ಬಿಜೆಪಿ ಸದನದ ಅತ್ಯಮೂಲ್ಯ ಸಮಯವನ್ನು ಹಾಳು ಮಾಡುತ್ತಿದ್ದಾರೆ. ಇದು ಬಿಜೆಪಿಯ ನಾಚಿಕೆಗೇಡಿನ ವರ್ತನೆ ಎಂದು ಕೆಂಡಕಾರಿರುವ ಕಾಂಗ್ರೆಸ್, ಬಿಜೆಪಿಗೆ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರಲು ಅನರ್ಹವಾಗಿದೆ ಎಂದಿದೆ.
ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡದ ಬಿಜೆಪಿ ಸಾಂವಿಧಾನಿಕ ವ್ಯವಸ್ಥೆಯನ್ನು ಅಪಹಾಸ್ಯ ಮಾಡುತ್ತಿದೆ. ಈಗ ಸ್ಪೀಕರ್ ಮುಖದ ಮೇಲೆ ಪೇಪರ್ ಎಸೆದು ಸದನದ ಸಭಾಧ್ಯಕ್ಷರ ಘನತೆಗೆ ಚ್ಯುತಿ ತಂದಿದ್ದಾರೆ. ಸದನದೊಳಗೆ ಗೂಂಡಾಗಿರಿ ನಡೆಸುವ ಬಿಜೆಪಿ ರೌಡಿ ಮೋರ್ಚಾದ ಸಂಸ್ಕೃತಿಯನ್ನು ಅನಾವರಣಗೊಳಿಸಿದೆ ಅಕ್ರೋಶ ವ್ಯಕ್ತಪಡಿಸಿದೆ.