ರವೀಂದ್ರ ಶ್ರೀಕಂಠಯ್ಯನವರು ಶಾಸಕರಾದ ನಂತರ ತಡಗವಾಡಿ ಗ್ರಾಮಕ್ಕೆ ಸುಮಾರು ಎರಡು ಕೋಟಿಗೂ ಹೆಚ್ಚು ಅನುದಾನ ನೀಡಿ ಅಭಿವೃದ್ಧಿ ಕಾಮಗಾರಿ ನಡೆಸಿದ್ದಾರೆ. ಆದರೆ ಮಾಜಿ ಶಾಸಕರ ಕಡೆಯ ಕೆಲವರು ವಿನಾಕಾರಣ ಜಗಳ ತೆಗೆದ ಸಂದರ್ಭದಲ್ಲಿ ರವೀಂದ್ರ ಶ್ರೀಕಂಠಯ್ಯನವರು ಸಮಾಧಾನವಾಗಿ ಉತ್ತರ ಹೇಳಿದರೂ ಕೇಳದಿದ್ದಾಗ ಸ್ವಲ್ಪ ಗದರಿಸಿದ್ದಾರೆ ಅಷ್ಟೇ.
ತಡಗವಾಡಿಯಲ್ಲಿ ಶಾಸಕರು- ಯುವಕರ ಮಧ್ಯೆ ಗಲಾಟೆ ನಡೆದಿದೆ ಎಂದು ಬಿಂಬಿಸುತ್ತಿರುವುದು ಸುಳ್ಳು ಸುದ್ದಿಯಾಗಿದೆ ಎಂದು ತಾಲೂಕು ಪಂಚಾಯತ್ ಮಾಜಿ ಸದಸ್ಯ ದೇವೇಗೌಡ ತಿಳಿಸಿದರು.
ಈ ಹಿಂದಿನ ಮಾಜಿ ಶಾಸಕರು ಸಮುದಾಯ ಭವನ ನಿರ್ಮಾಣದ ಹೆಸರಿನಲ್ಲಿ ಸುಳ್ಳು ಬಿಲ್ ನಡಿ ₹ 8 ಲಕ್ಷ ದುರುಪಯೋಗ ಮಾಡಿಕೊಂಡಿದ್ದರು. ಈಗ ಆ ಸಮುದಾಯ ಭವನವನ್ನು ರವೀಂದ್ರ ಶ್ರೀಕಂಠಯ್ಯ ಪೂರ್ಣಗೊಳಿಸಿರುವುದು ಮಾಜಿ ಶಾಸಕರ ಬೆಂಬಲಿಗರಿಗೆ ಸಿಟ್ಟು ತರಿಸಿದೆ.
ಅದಕ್ಕಾಗಿ ಇಂದು ಕೆಲವರು ಗಲಾಟೆ ಮಾಡಲು ಬಂದಿದ್ದರು. ಶಾಸಕ ರವೀಂದ್ರ ಶ್ರೀಕಂಠಯ್ಯ ಮಾಡಿರುವ ಕೆಲಸವನ್ನು, ಈ ಹಿಂದಿನ ಶಾಸಕರು ಮಾಡಿರುವ ಕೆಲಸವನ್ನು ನೋಡಿದರೆ ಸಾಕು, ಯಾರು ಅಭಿವೃದ್ಧಿ ಮಾಡಿದ್ದಾರೆ ಎಂಬುದು ತಿಳಿಯುತ್ತದೆ. ಅಭಿವೃದ್ಧಿ ಕಾರ್ಯಗಳ ಬಗ್ಗೆ ತಡಗವಾಡಿಗೆ ಬಂದು ಯಾರೂ ಬೇಕಾದರೂ ನೋಡಲಿ ಎಂದು ಸವಾಲು ಹಾಕಿದರು.