ಮಂಡ್ಯ ತಾಲ್ಲೂಕಿನ ಬಸರಾಳು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಮಳೆಯಿಂದ ಹಾನಿಗೊಳಗಾಗಿ ಸಂಕಷ್ಟಕ್ಕೆ ಒಳಗಾದವರಿಗೆ ಜೆಡಿಎಸ್ ನಾಯಕ ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಆರ್ಥಿಕ ಸಹಾಯ ಧನ ವಿತರಿಸಿದರು.
ಬಸರಾಳು ಹೋಬಳಿಯ ಜಿ.ಹೊಸಹಳ್ಳಿ, ಹೊಸಹಳ್ಳಿಕೊಪ್ಪಲು, ಕಾಲೋನಿ, ಚಂದಗಾಲು, ದೊಡ್ಡಗರುಡನಹಳ್ಳಿ ಗ್ರಾಮದ ಸಾಕಮ್ಮ ಬೋರಯ್ಯ, ಮಹದೇವಮ್ಮ, ಪ್ರಕಾಶ್ ರವರ ಮನೆಗಳು ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಗೋಡೆಗಳು ಕುಸಿದಿತ್ತು.
ಈ ಹಿನ್ನಲೆಯಲ್ಲಿ ಇಂದು ಗ್ರಾಮಗಳಿಗೆ ಭೇಟಿ ನೀಡಿದ ರಾಮಚಂದ್ರು ಹಾನಿಗೊಳಗಾದ ಮನೆಗಳನ್ನು ಪರಿಶೀಲಿಸಿ ಆರ್ಥಿಕ ಸಹಾಯ ಮಾಡಿದರು.
ಈ ಸಂದರ್ಭದಲ್ಲಿ ಕುಮಾರ, ಧನಂಜಯ, ಶಿವಲಿಂಗಸ್ವಾಮಿ ನಾಗೇಶ್, ಪಾಪಣ್ಣ, ಸ್ವಾಮಿ, ಸಂತೋಷ್ ಹಾಗೂ ಊರಿನ ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.