Wednesday, September 18, 2024

ಪ್ರಾಯೋಗಿಕ ಆವೃತ್ತಿ

ನಾಗಮಂಗಲ | ರೈತ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ

ಕರ್ನಾಟಕ ರಾಜ್ಯ ರೈತ ಸಂಘ (ಮೂಲ ಸಂಘಟನೆ )ನಾಗಮಂಗಲ ತಾಲೂಕು ಘಟಕಕ್ಕೆ ಇಂದು ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು.

ನಾಗಮಂಗಲ ಪಟ್ಟಣದ ಪ್ರವಾಸಿಮಂದಿರದಲ್ಲಿ ರೈತ ಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೈಸೂರು ವಿಭಾಗದ ಜಿಲ್ಲಾ ಅಧ್ಯಕ್ಷರು ಬನ್ನೂರು ನಾರಾಯಣಗೌಡ ಮಾತನಾಡಿ, ರೈತ ಸಂಘಟನೆ ಒಂದು ರೈಲು ಇದ್ದಂತೆ. ಇಲ್ಲಿ ಬರುವವರು ಶಾಶ್ವತವಾಗಿ ಉಳಿಯುವುದಿಲ್ಲ. ಅವರವರ ಕೆಲಸ ಮುಗಿದ ನಂತರ ಬಿಟ್ಟು ಹೋಗುವವರ ಸಂಖ್ಯೆ ಬಹಳ‌.ಆದರೆ ಇಂದು ಈ ಸಭೆಯಲ್ಲಿ ಹೆಚ್ಚಿನ ಯುವಕರು ಭಾಗವಹಿಸಿರುವುದು ಒಳ್ಳೆಯ ಬೆಳವಣಿಗೆ ಎಂದರು.

ರೈತರ ಪರವಾಗಿ ನಾವೆಲ್ಲ ಒಟ್ಟಾಗಿ ಕೆಲಸ ಮಾಡೋಣ.ಅನ್ನದಾತನ ಸಮಸ್ಯೆಗಳ ಪರವಾಗಿ ಸಂಘಟಿತರಾಗಿ ಹೋರಾಡೋಣ ಎಂದರು‌.

ಈ ಕಾರ್ಯಕ್ರಮ ಆಯೋಜನೆ ಮಾಡಿದ ತಾಲೂಕಿನ ಸುರೇಶ್ ಅವರಿಗೆ ಅಭಿನಂದನೆಗಳನ್ನು ತಿಳಿಸಿದ ಅವರು, ರೈತ ಸಂಘಟನೆಯು ಬೆಳೆದು ಬಂದ ಪೂರ್ವಾಪರ ಇತಿಹಾಸವನ್ನು ತಿಳಿಸಿದರು.

ತಾಲೂಕು ರೈತಸಂಘದ ಗೌರವಾಧ್ಯಕ್ಷರಾಗಿ ಕೆ.ಎಸ್. ರಾಜು, ಅಧ್ಯಕ್ಷರಾಗಿ ಎಲ್. ಸುರೇಶ್, ಕಾರ್ಯಾಧ್ಯಕ್ಷರಾಗಿ ಹರೀಶ್, ಜಿ.ಟಿ. ಉಪಾಧ್ಯಕ್ಷರಾಗಿ ಯೋಗೇಶ್, ರವಿಕುಮಾರ್ ಆಯ್ಕೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಶಂಕರೇಗೌಡ, ಮಂಡ್ಯ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗು, ರಾಮಲಿಂಗೇಗೌಡ, ಮಂಜೇಗೌಡ,ಕೆ. ಜಿ. ಉಮೇಶ್, ಸುರೇಶ್ ನಾಗಮಂಗಲ, ವೆಂಕಟೇಶ್, ರಾಮೇಗೌಡ,ಯುವ ಅಧ್ಯಕ್ಷ ಯಶೋಧರ್ ಜಿ. ಟಿ, ಖಜಾಂಚಿ ಬೋರೇಗೌಡ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!