ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಅವರು ಸತ್ತು ಎಂಟು ಹತ್ತು ವರ್ಷ ಕಳೆದೇ ಹೋಗಿದ್ದು, ಈಗ ಎಚ್.ಡಿ.ಕುಮಾರಸ್ವಾಮಿ ಅವರು ರಾಕೇಶ್ ಹೆಸರನ್ನು ಎಳೆದು ತರುವ ಮೂಲಕ ಮಾಡಲು ಹೊರಟಿರುವ ಸಾಧನೆ ಅಥವಾ ಸಿದ್ದಾಂತ ಅಥವಾ ನಿರೂಪಣೆ ಏನು ಎನ್ನುವ ಚರ್ಚೆ ಶುರುವಾಗಿದೆ.
ರಾಕೇಶ್ ಸಿದ್ದರಾಮಯ್ಯ ಅವರು ಅನಾರೋಗ್ಯದಿಂದ ಮರಣ ಹೊಂದಿದ್ದಾರೆ ಎನ್ನುವುದು ಅಧಿಕೃತ ವಿಚಾರ. ಆದರೆ ಉಳಿದದ್ದೆಲ್ಲ ಕಲ್ಪನೆಗೆ ಬಿಟ್ಟಿದ್ದು ಅಥವಾ ಕುಮಾರಸ್ವಾಮಿಗೆ ಗೊತ್ತಿರಬಹುದಾದಂತಹದು. ಈ ಮಧ್ಯೆ ಯಾವ ಮೂಲೆಯಿಂದ ನೋಡಿದರೂ ಸಹ ಪ್ರಜ್ವಲ್ ರೇವಣ್ಣ ತರಹ ರಾಕೇಶ್ ಸಿದ್ದರಾಮಯ್ಯ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿದ, ಮಾನಹಾನಿ ಮಾಡಿದ, ಮಾರ್ಯಾದೆ ತೆಗೆದ ವಿಚಾರ ಎಂದಿಗೂ ಕಂಡು ಬಂದಿರಲಿಲ್ಲ. ಹಾಗಾಗಿ ಕುಮಾರಸ್ವಾಮಿ ಅವರು ರಾಕೇಶ್ ಅವರ ಹೆಸರನ್ನು ಎಳೆದು ತಂದು ಏನನ್ನು ಸಾಧಿಸಲು ಹೊರಟ್ಟಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ರಾಕೇಶ್ ಸಿದ್ದರಾಮಯ್ಯ ಸತ್ತು ಏಳೆಂಟು ವರ್ಷಗಳೇ ಕಳೆದು ಹೋಗಿದೆ. ಈಗ ಪ್ರಜ್ವಲ್ ರೇವಣ್ಣ ಎಂತಹ ಸ್ತ್ರೀ ಪೀಡಕ ಎಂಬುದು ಆತನೇ ಮಾಡಿಟ್ಟುಕೊಂಡಿದ್ದ ವೀಡಿಯೋಗಳ ಮೂಲಕ ಜಗತ್ತಿಗೇ ಗೊತ್ತಾಗಿದೆ. ದೇವೇಗೌಡರ ಕುಟುಂಬದ ಮಾನ-ಮರ್ಯಾದೆ ತೆಗೆದ ಪ್ರಜ್ವಲ್ ರೇವಣ್ಣನಿಗೆ ಪ್ರತಿಯಾಗಿ ರಾಕೇಶ್ ಸಿದ್ದರಾಮಯ್ಯ ಹೆಸರನ್ನು ಪದೇ ಪದೇ ಎಳೆದು ತರುವ ಮೂಲಕ ಕುಮಾರಸ್ವಾಮಿ ರಾಜ್ಯದ ಜನರ ಎದುರು ಬಹಳ ಸಣ್ಣವರಾಗಿದ್ದಾರೆ. ಅವರೂ ಕೂಡ ತಮ್ಮ ಗೌರವವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚಿತವಾಗುತ್ತಿದೆ