Thursday, September 19, 2024

ಪ್ರಾಯೋಗಿಕ ಆವೃತ್ತಿ

ಯುದ್ಧ ಪೀಡಿತ ಗಾಝಾಕ್ಕೆ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಿದ ಭಾರತ

ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಪ್ರಾರಂಭವಾದ ಎರಡು ವಾರಗಳ ನಂತರ ಇಸ್ರೇಲ್‌ ಪಡೆಗಳು ದಿಗ್ಭಂದನ ಹಾಕಿರುವ ಪ್ಯಾಲೆಸ್ತೀನ್ ನಗರವಾದ ಗಾಝಾಕ್ಕೆ ಭಾರತ ಭಾನುವಾರ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಿದೆ.

ಅಗತ್ಯ ಔಷಧಿಗಳು, ಶಸ್ತ್ರಚಿಕಿತ್ಸಾ ವಸ್ತುಗಳು, ಟೆಂಟ್‌ಗಳು, ಟಾರ್ಪೌಲಿನ್‌ಗಳು, ನೀರು ಶುದ್ಧೀಕರಣ ಮಾತ್ರೆಗಳು ಸೇರಿ ಉಪಯುಕ್ತ ವಸ್ತುಗಳನ್ನು ಭಾರತದಿಂದ ಗಾಝಾಕ್ಕೆ ಕಳುಹಿಸಿಕೊಡಲಾಗಿದೆ.

ಇದಲ್ಲದೆ ಯುದ್ಧ ಕುರಿತ ಇತ್ತೀಚಿನ ವರದಿಯಲ್ಲಿ ಇಸ್ರೇಲ್‌ ಯುದ್ಧ ವಿಮಾನವು ಪಶ್ಚಿಮ ದಂಡೆಯಲ್ಲಿರುವ ಅಲ್-ಅನ್ಸಾರ್ ಮಸೀದಿಯ ಕೆಳಗಿರುವ ಕಾಂಪೌಂಡ್‌ನ್ನು ಹೊಡೆದಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ತಿಳಿಸಿದೆ.

“>

ಅ.7ರಂದು ಹಮಾಸ್ ಸಶಸ್ತ್ರ ಗುಂಪು ಇಸ್ರೇಲ್‌ ಮೇಲೆ ಹಠಾತ್ ದಾಳಿ ನಡೆಸಿದ ಬಳಿಕ ಗಾಝಾದ ಮೇಲೆ ಸಂಪೂರ್ಣ ದಿಗ್ಬಂಧನ ವಿಧಿಸಿತ್ತು. ಇಸ್ರೇಲ್ ಅಲ್ಲಿಗೆ ನೀರು, ವಿದ್ಯುತ್, ಇಂಧನ ಹಾಗೂ ಆಹಾರ ಪೂರೈಕೆಯನ್ನು ಕಡಿತಗೊಳಿಸಿತ್ತು.

ಯುಎನ್‌ ಮಧ್ಯಪ್ರವೇಶಿಸಿ ಗಾಝಾದ ನಿರಾಶ್ರಿತರಿಗೆ ಅಂತರಾಷ್ಟ್ರೀಯ ಸಮುದಾಯ ಸಹಾಯಕ್ಕೆ ಮುಂದೆ ಬರಬೇಕು ಎಂದು ಮನವಿ ಮಾಡಿತ್ತು. ಗಾಝಾದ ಜನರು ಆಹಾರ, ನೀರು, ಔಷಧಿಗಾಗಿ ಪರದಾಡುತ್ತಾರೆ. ಪರಿಸ್ಥಿತಿ ಭೀಕರವಾಗಿದೆ ಎಂದು ಯುಎನ್ ವಿಶ್ವದ ಗಮನ ಸೆಳೆದಿತ್ತು.

ಗಾಝಾದ ಅಲ್-ಅಹ್ಲಿ ಆಸ್ಪತ್ರೆ ಮೇಲಿನ ದಾಳಿ ನಡೆಸಿದ್ದ ಇಸ್ರೇಲ್ ಪಡೆ 500ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿತ್ತು. ಗಾಝಾದಲ್ಲಿ ಇಸ್ರೇಲ್ ಆಕ್ರಮಣಕ್ಕೆ ಮೃತರ ಸಂಖ್ಯೆ 4137ಕ್ಕೆ ಏರಿಕೆಯಾಗಿದೆ ಎಂದು ಹಮಾಸ್‌ನ  ಸಚಿವರೋರ್ವರು ತಿಳಿಸಿದ್ದಾರೆ. ಇಸ್ರೇಲ್‌ನಲ್ಲಿ ಹಮಾಸ್‌ ದಾಳಿಯಿಂದ 1400ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!